Advertisement

ಕಟೀಲು ದೇವಿಗೆ ಮತ್ತೆ ಅವಮಾನ: ಜಾಲತಾಣದಲ್ಲಿ  ವೈರಲ್‌

08:07 AM Nov 02, 2017 | |

ಮಂಗಳೂರು: ಕಟೀಲು ಕ್ಷೇತ್ರದ ದೇವತೆಯನ್ನು ಮತ್ತೆ ಅವಮಾನ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್‌ ಮಾಡಲಾಗಿದೆ ಎಂಬ ವಿಷಯ ವೈರಲ್‌ ಆಗಿದೆ.

Advertisement

“ಜಬ್ಟಾರ್‌ ಮಂಗಳೂರು’ ಹೆಸರಿನಿಂದ ನಿರ್ವ ಹಣೆ ಯಾಗುತ್ತಿರುವ ಫೇಸುºಕ್‌ ಪೇಜ್‌ನಲ್ಲಿ ರಾಮ, ಸೀತೆ, ಕಟೀಲು ದುರ್ಗಾ ಪರಮೇಶ್ವರಿ, ಸ್ವಾಮಿ ಕೊರಗಜ್ಜ ಮತ್ತಿತರ ಹಿಂದೂ ದೇವಿ-ದೇವರ ವಿರುದ್ಧ ಅಸಹ್ಯಕರ ಹಾಗೂ ವಿಕೃತ ಪೋಸ್ಟ್‌ಗಳನ್ನು ಹಾಕಲಾಗಿದೆ ಎಂಬ ವಿಷಯ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಈ ವ್ಯಕ್ತಿ ಇದೀಗ ತನ್ನ ಖಾತೆಯನ್ನು ಡಿಲೀಟ್‌ ಮಾಡಿ ದ್ದರೂ ಈತನ ಕಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ  ಹರಿದಾಡುತ್ತಿವೆ. 

ಈ ಬಗ್ಗೆ ಪೊಲೀಸ ರಲ್ಲಿ ವಿಚಾರಿಸಿದರೆ ಇದುವರೆಗೆ ಈ ಕುರಿತು ಯಾರೂ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ ಇದೇ ರೀತಿ ಬಿ.ಸಿ. ರೋಡ್‌ನ‌ ಜಬ್ಟಾರ್‌ ಎಂಬಾತನ ಫೇಸುºಕ್‌ ಖಾತೆಯಲ್ಲಿ ಕಟೀಲು ದೇವತೆಯನ್ನು ಅವಮಾನಿಸಿ ಕಮೆಂಟ್‌ಗಳನ್ನು ಹಾಕಲಾಗಿತ್ತು. ಇದಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ, ಪ್ರತಿಭಟನೆಗಳು ನಡೆದಿದ್ದವು. ಈ ಬಗ್ಗೆ ಕೆಲವು ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಇದರ ಸೂತ್ರಧಾರರ ಪತ್ತೆ ಇನ್ನೂ ಆಗಿಲ್ಲ. ಫೇಸುºಕ್‌ ಸಂಸ್ಥೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next