Advertisement
ಕಾಳಿ ಬ್ರಿಗೇಡ್ ಸಂಘಟನೆ ಮತ್ತು ವ್ಯಾಪಾರಸ್ಥರ ಸಂಘ, ಜೋಯಿಡಾದ 25ಕ್ಕೂ ಹೆಚ್ಚು ಜನರು ಉಸ್ತುವಾರಿ ಸಚಿವ ಶಿವಾರಾಮ ಹೆಬ್ಟಾರ್ ಅವರೊಂದಿಗೆ ಯಲ್ಲಾಪುರದಲ್ಲಿ ಸಭೆ ನಡೆಸಿ, 27/02/2017 ಮತ್ತು 03/10/2018 ರ ಕರಡು ಅಧಿಸೂಚನೆ ಕುರಿತು ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶ 28/09/2020 ರ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.
ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮತ್ತೂಮ್ಮೆ ಚರ್ಚಿಸಲಾಗುವುದು ಎಂದರು. ಕಸ್ತೂರಿರಂಗನ್ ವರದಿ ಜಾರಿಯಿಂದ
ಜೋಯಿಡಾ ತಾಲೂಕಿನ ಮೇಲಾಗುವ ಪರಿಣಾಮಗಳ ಕುರಿತು ವಕೀಲ ಎಸ್.ಜಿ. ದೇಸಾಯಿ ಸಭೆಗೆ ಮಾಹಿತಿ ನೀಡಿ, ಸರ್ಕಾರ
ಈ ಬಗ್ಗೆ ಜನಪರವಾಗಿ ತೆಗೆದುಕೊಂಡಿರುವ ಕ್ರಮಗಳು ಮತ್ತು ಪತ್ರಿಕೆಗಳು ಸರ್ಕಾರ ಮತ್ತು ಜನಸಾಮಾನ್ಯರನ್ನು ಜಾಗೃತಿಗೊಳಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು.
Related Articles
ಅಧಿಸೂಚನೆಗಳನ್ನು ಪರಿಗಣಿಸುವುದಾದರೆ, ಸಾರ್ವಜನಿಕರ ಅಹವಾಲು ಸಭೆ ಮೊದಲು ನಡೆಸಬೇಕು.
Advertisement
ಕಾಳಿ ಬ್ರಿಗೇಡ್ ಅಧ್ಯಕ್ಷ ಸತೀಶ ನಾಯ್ಕ, ಖಾನಾಪುರದ ನೇತಾಜಿ ದೇಸಾಯಿ, ಪ್ರಭಾಕರ ನಾಯ್ಕ, ವಿಷ್ಣು ದೇಸಾಯಿ, ನಾರಾಯಣ ಹೆಬ್ಟಾರ್, ಅಜೀತ್ ಟೆಂಗ್ಸೆ, ಉದಯ ದೇಸಾಯಿ, ಉಮೇಶ ವೇಳಿಪ, ಸುನೀಲ ದೇಸಾಯಿ, ಸಿಮಾಂವ್ ವೇಗಸ್, ಮೋಹನ ದೇಸಾಯಿ, ಸುಧಾಕರ ದೇಸಾಯಿ, ಮಂಜುನಾಥ ಭಟ್ಟ್, ರಾಜೇಶ ದೇಸಾಯಿ, ರತ್ನಾಕರ, ವಿನಾಯಕ ಕರಂಜೋಳಕರ, ರೂಪೇಶ ದೇಸಾಯಿ, ಸಮೀರ ಮುಜಾವರ, ಮುಂತಾದವರು ಹಾಗೂ ತಾಲೂಕಿನ ಗಣ್ಯರು ಉಪಸ್ಥಿತರಿದ್ದರು.
ಕಾಳಿ ಬ್ರಿಗೇಡ ಸಂಘಟನೆ ಹಾಗೂ ವ್ಯಾಪಾರಸ್ಥರ ಸಂಘದ ವತಿಯಿಂದ ಹಳಿಯಾಳ-ಜೋಯಿಡಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಕ್ಲೃಕರ್ಗೆ ಕಸ್ತೂರಿರಂಗನ ವರದಿ ಜಾರಿ ಮಾಡದಂತೆ ಮನವಿ ಸಲ್ಲಿಸಲಾಯಿತು.