Advertisement

ಕಾಶಿನಾಥ್‌ ಅವರು ನನ್ನ ಪಾಲಿನ ದೇವರು: ಭಾವುಕರಾದ ಉಪೇಂದ್ರ 

03:14 PM Jan 18, 2018 | |

ಬೆಂಗಳೂರು: ‘ಕಾಶಿನಾಥ್‌ ಅವರು ನನ್ನ ಪಾಲಿನ ದೇವರು, ಅವರ ಮನೆ ನನ್ನ ಪಾಲಿಗೆ ದೇವಸ್ಥಾನ’ ಎಂದು ನಟ,ಕೆಪಿಜೆಪಿ ಸ್ಥಾಪಕ ಉಪೇಂದ್ರ ಕಣ್ಣೀರಿಟ್ಟಿದ್ದಾರೆ.

Advertisement

ಕಾಶಿನಾಥ್‌ ಅವರ ಪಾರ್ಥಿವ ಶರೀರ ಜಯನಗರದ ಮನೆಗೆ ತಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪೇಂದ್ರ ತೀವ್ರ ಭಾವುಕರಾಗಿ ಕಣ್ಣೀರು ಸುರಿಸಿದರು.

‘ನಾನು ಚಿತ್ರರಂಗದ ಎಬಿಸಿಡಿ ಕಲಿತದ್ದು ಕಾಶಿನಾಥ್‌ ಅವರಲ್ಲಿ. ಅವರು ನನ್ನ ಪಾಲಿಗೆ ದೇವರು.  ಅವರ ಮನೆಯಲ್ಲಿ ನನಗೆ ಊಟ ಹಾಕಿದ್ದಾರೆ. ಅವರೊಬ್ಬ ಮಹಾನ್‌ ವ್ಯಕ್ತಿ.ಅವರ ನಿಧನದಿಂದ ನನಗೆ ತುಂಬಾ ಆಘಾತವಾಗಿದೆ. ಅವರ ಅನಾರೋಗ್ಯದ ವಿಚಾರ ನನಗೆ ಗೊತ್ತಿರಲಿಲ್ಲ. ಅವರು ಯಾವ ನೋವನ್ನೂ ಹೇಳಿಕೊಳ್ಳುತ್ತಿರಲಿಲ್ಲ’ಎಂದರು. 

ತನ್ನ ಗುರು ಇಹಲೋಕ ತ್ಯಜಿಸಿದ ವಿಚಾರ ತಿಳಿದ ಕೂಡಲೇ ಶ್ರೀಶಂಕರ ಅಸ್ಪತ್ರೆಗೆ ಧಾವಿಸಿ ಬಂದಿದ್ದ ಉಪೇಂದ್ರ ಅಂತಿಮ ದರ್ಶನ ಪಡೆದಿದ್ದರು.

ಉಪೇಂದ್ರ ಅವರು ಸಹಾಯಕ ನಿರ್ದೇಶಕನಾಗಿ  ಕಾಶಿನಾಥ್‌ ಅವರೊಂದಿಗೆ ಚಿತ್ರರಂಗದ ಪಯಣ ಆರಂಭಿಸಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next