Advertisement

ಸಿಡಿಲು ಬಡಿದು ಗರ್ಭಿಣಿ ದನ ಸಾವು, ತೆಂಗಿನ ಮರಕ್ಕೆ ಬೆಂಕಿ

12:13 AM Apr 09, 2023 | Team Udayavani |

ಕಾಸರಗೋಡು: ಸಿಡಿಲು ಬಡಿದು ಎಂಟು ತಿಂಗಳ ಗರ್ಭಿಣಿ ಹಸು ಸಾವಿಗೀಡಾಗಿದ್ದು, ತೆಂಗಿನ ಮರಗಳಿಗೆ ಬೆಂಕಿ ತಗಲಿ ಉರಿದು ಹೋಗಿದೆ. ಮನೆಯ ವಿದ್ಯುತ್‌ ಉಪಕರಣಗಳು ಹಾನಿಗೀಡಾದ ಘಟನೆ ನಾರಂಪಾಡಿಯಲ್ಲಿ ನಡೆದಿದೆ.

Advertisement

ನಾರಂಪಾಡಿಯ ಉಮ್ಮರ್‌ ಅವರ ದನ ಸಿಡಿಲಿಗೆ ಬಲಿಯಾಗಿದೆ. ಸಿಡಿಲು ಮನೆ ಸಮೀಪದ ಹಟ್ಟಿಗೆ ಬಡಿದಿದ್ದು, ಅಲ್ಲಿ ಕಟ್ಟಿ ಹಾಕಲಾಗಿದ್ದ ದನ ಮೃತಪಟ್ಟಿತು. ಸಿಡಿಲಿನ ಆಘಾತಕ್ಕೆ ಉಮ್ಮರ್‌ ಅವರ ಕಾಂಕ್ರೀಟ್‌ ಹಾಕಿದ ಮನೆಯ ವಿದ್ಯುತ್‌ ವಯರಿಂಗ್‌ ಮತ್ತು ಉಪಕರಣಗಳು ಹಾನಿಗೀಡಾಗಿವೆ. ಮನೆ ಹಿತ್ತಿಲಿನಲ್ಲಿದ್ದ ಎರಡು ತೆಂಗಿನ ಮರಗಳಿಗೆ ಬೆಂಕಿ ಹತ್ತಿಕೊಂಡಿದೆ. ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಆರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next