Advertisement

ಕಾಸರಗೋಡು: ಗ್ರಾಹಕನ ಸೋಗಿನಲ್ಲಿ ಬಂದು ಅಂಗಡಿ ಮಾಲಕಿಯ ಚಿನ್ನದ ಸರ ಲಪಟಾವಣೆ

09:57 PM Apr 27, 2023 | Team Udayavani |

ಕಾಸರಗೋಡು: ತರಕಾರಿ ಖರೀದಿಸುವ ಸೋಗಿನಲ್ಲಿ ದ್ವಿಚಕ್ರ ವಾಹನದಲ್ಲಿ ಅಂಗಡಿಗೆ ಬಂದ ಕಳ್ಳನೋರ್ವ ಅಂಗಡಿಯ ಮಾಲಕಿಯ ಕುತ್ತಿಗೆಯಲ್ಲಿದ್ದ ಮೂರೂವರೆ ಪವನ್‌ನ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಪರವನಡ್ಕ ಕೋಟ್ಟಪುರದಲ್ಲಿ ನಡೆದಿದೆ.

Advertisement

ಕುಂಞಿಕೋರನ್‌ ಅವರ ಪತ್ನಿ ಲಕ್ಷ್ಮೀ (68) ಸರ ಕಳೆದುಕೊಂಡವರು. ಲಕ್ಷಿ$¾à ಅವರ ಅಂಗಡಿಗೆ ಎ.26ರಂದು ಮಧ್ಯಾಹ್ನ 12 ಗಂಟೆಗೆ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿ ಆಲೂಗಡ್ಡೆ ನೀಡುವಂತೆ ಕೇಳಿದ್ದ. ಆಲೂಗಡ್ಡೆ ತೆಗೆಯಲೆಂದು ಲಕ್ಷಿ$¾à ಬಗ್ಗಿದಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ ಎಂದು ಮೇಲ್ಪರಂಬ ಪೊಲೀಸರಿಗೆ ದೂರು ನೀಡಲಾಗಿದೆ.

ಕೆಲವು ದಿನಗಳ ಹಿಂದೆ ಎಡನೀರು ಪಾಡಿಯಲ್ಲೂ ದಿನಸಿ ಅಂಗಡಿಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಬಗ್ಗೆ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ಪ್ರಕರಣಗಳಲ್ಲೂ ಓರ್ವನೇ ಆರೋಪಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next