Advertisement

Kasaragodu Crime: ತಂದೆಯ ಕೊಲೆ: ಪುತ್ರ ಪೊಲೀಸ್‌ ವಶಕ್ಕೆ

08:12 PM Apr 02, 2024 | Team Udayavani |

ಕಾಸರಗೋಡು: ತೆಂಗಿನ ಕಾಯಿ ಸುಲಿಯುವ ಉಪಕರಣದಿಂದ ತಲೆಗೆ ಹೊಡೆದು ತಂದೆಯನ್ನು ಕೊಲೆಗೈದ ಘಟನೆ ಪಳ್ಳಿಕ್ಕೆರೆಯಲ್ಲಿ ನಡೆದಿದೆ.

Advertisement

ಇಲ್ಲಿನ ಸೈಂಟ್‌ ಮೇರೀಸ್‌ ಶಾಲೆ ಸಮೀಪದ ಕೋಟಮತ್ತ್ ವೀಟಿಲಿನ ಪಿ.ಅಪ್ಪಕುಂಞಿ(65) ಕೊಲೆಗೀಡಾಗಿದ್ದು, ಈ ಸಂಬಂಧ ಪುತ್ರ ಪಿ.ಟಿ. ಪ್ರಮೋದ್‌ (37)ನನ್ನು ಬೇಕಲ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಎ. 1ರಂದು ಸಂಜೆ ಮನೆಗೆ ಬಂದ ಪ್ರಮೋದ್‌ ತೆಂಗಿನಕಾಯಿ ಸುಲಿಯುವ ಉಪಕರಣದಿಂದ ಅಪ್ಪಕುಂಞಿ ಅವರ ತಲೆಗೆ ಹೊಡೆದ ಕಾರಣ ಗಂಭೀರ ಗಾಯಗೊಂಡಿದ್ದರು.

ತತ್‌ಕ್ಷಣ ಸ್ಥಳೀಯರು ಧಾವಿಸಿ ಬಂದು ಗಾಯಾಳು ಅಪ್ಪಕುಂಞಿ ಅವರನ್ನು  ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಸೋಮವಾರ ರಾತ್ರಿ ಮೃತಪಟ್ಟರು.

ಕಳೆದ ರವಿವಾರ ಮಧ್ಯಾಹ್ನವೂ ಪುತ್ರ ಪ್ರಮೋದ್‌ ಹಲ್ಲೆ ಮಾಡಿದ್ದನೆಂದು ಅಪ್ಪಕುಂಞಿ ಬೇಕಲ ಪೊಲೀಸರಿಗೆ ದೂರು ನೀಡಿದ್ದರು.

Advertisement

ಈ ಸಂಬಂಧ ಬೇಕಲ ಪೊಲೀಸರು ಕೊಲೆ ಯತ್ನ ದಾಖಲಿಸಿದ್ದರು. ತನ್ನ ವಿರುದ್ಧ ಕೇಸು ನೀಡಿದ್ದರಿಂದ ಪ್ರಮೋದ್‌ ತಂದೆಯನ್ನು ಕೊಲೆಗೈಯಲು ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next