Advertisement

Kasaragod ಸಾಕ್ಷಿದಾರನಿಗೆ ಬೆದರಿಕೆ: ಆರೋಪಿ ಬಂಧನ

11:13 PM Jan 23, 2024 | Team Udayavani |

ಕಾಸರಗೋಡು: ಸಾಕ್ಷಿದಾರನಿಗೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉಳಿಯತ್ತಡ್ಕ ಪಳ್ಳ ರಸ್ತೆ ಬಳಿಯ ಉಸ್ಮಾನ್‌ ಕೆ. ಆಲಿಯಾಸ್‌ ಚಾರ್ಲಿ ಉಸ್ಮಾನ್‌ (42)ನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಖಾಸಗಿ ಬಸ್‌ ಸಿಬಂದಿಯಾಗಿರುವ ಪಾಡಿ ಎದುರ್ತೋಡು ನಿವಾಸಿ ನವೀನ್‌ ಕುಮಾರ್‌ (24) ಅವರಿಗೆ ಡಿ. 24ರಂದು ಬೆದರಿಕೆಯೊಡ್ಡಲಾಗಿತ್ತೆಂದು ಪೊಲೀಸರಿಗೆ ದೂರು ನೀಡಲಾಗಿತ್ತು. 2019ರಲ್ಲಿ ನವೀನ್‌ ಕುಮಾರ್‌ ಅವರ 5000 ರೂ. ಇದ್ದ ಪರ್ಸ್‌ ಅನ್ನು ಕಿತ್ತುಕೊಂಡು ಎಸೆದು ಹಲ್ಲೆ ಮಾಡಲಾಗಿತ್ತು. ನವೀನ್‌ ಕುಮಾರ್‌ ನೀಡಿದ ದೂರಿನಂತೆ ಪೊಲೀಸರು ಉಳಿಯತ್ತಡ್ಕದ ಚಾರ್ಲಿ ಸತ್ತಾರ್‌ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಚಾರ್ಲಿ ಸತ್ತಾರ್‌ ಚಾರ್ಲಿ ಉಸ್ಮಾನ್‌ನ ಸಹೋದರನಾಗಿದ್ದಾನೆ. ಈ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(2)ದಲ್ಲಿ ನಡೆಯುತ್ತಿದೆ. ಡಿ. 24ರಂದು ತನ್ನ ಸಹೋದರನ ವಿರುದ್ಧ ನ್ಯಾಯಾಲಯದಲ್ಲಿ ಹೇಳಿಕೆ ನೀಡಬಾರದೆಂದು ಹೇಳಿ ನವೀನ್‌ ಕುಮಾರ್‌ಗೆ ಚಾರ್ಲಿ ಉಸ್ಮಾನ್‌ ಬೆದರಿಕೆಯೊಡ್ಡಿರುವುದಾಗಿ ದೂರು ನೀಡಲಾಗಿತ್ತು. ನ್ಯಾಯಾಲಯದ ನಿರ್ದೇಶದಂತೆ ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next