Advertisement

Kasaragod ಎರಡು ಕಾರು ಕಳವು : ಆರೋಪಿಯ ಬಂಧನ

12:39 AM Apr 07, 2024 | Team Udayavani |

ಕಾಸರಗೋಡು: ಚೆಂಗಳ ಸಮೀಪದ ಸಂತೋಷ್‌ ನಗರದಲ್ಲಿ ವಾಹನ ಸರ್ವೀಸ್‌ ಸ್ಟೇಶನ್‌ನಿಂದ 2022ರ ಮಾರ್ಚ್‌ 20ರಂದು ಎರಡು ಕಾರುಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆಲಪ್ಪುಳ ಸೌತ್‌ ತಲವಡಿ ಗ್ರಾಮದ ಕುತ್ತನ್‌ಪರಂಬಿಲ್‌ ನಿವಾಸಿ ವಿನೋದ್‌ ಆಲಿಯಾಸ್‌ ವಿನೋದ್‌ ಮ್ಯಾಥ್ಯೂ ಆಲಿಯಾಸ್‌ ಇಟ್ಟೂಪು (45)ನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಬೇರೊಂದು ಕಳವು ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಶೊರ್ನೂರು ಪೊಲೀಸರು ಬಂಧಿಸಿದ್ದರು. ಪೊಲೀಸರು ಈತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕಾಸರಗೋಡಿನ ಸರ್ವೀಸ್‌ ಸ್ಟೇಶನ್‌ನಿಂದ ಎರಡು ಕಾರುಗಳನ್ನು ಕಳವು ಮಾಡಿದ್ದು ಬಯಲಾಯಿತು. ಅದರಂತೆ ಆತನನ್ನು ಬಂಧಿಸಲಾಗಿದೆ. ಕಳವು ಮಾಡಿದ ಕಾರುಗಳನ್ನು ಕೊಯಮತ್ತೂರಿನಲ್ಲಿ ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಈ ಕಾರುಗಳನ್ನು ಪತ್ತೆಹಚ್ಚುವ ಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next