Advertisement

Kasaragod; ಸರಗಳ್ಳತನ ಪ್ರಕರಣ: ಬಂಧಿತ ಆರೋಪಿ 13 ಪ್ರಕರಣಗಳಲ್ಲಿ ಶಾಮೀಲು

08:25 PM Aug 25, 2023 | Team Udayavani |

ಕಾಸರಗೋಡು: ಕಳೆದ ಜನವರಿ ತಿಂಗಳಿನಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ಮಹಿಳೆಯರ ಕತ್ತಿನಿಂದ ಚಿನ್ನದ ಸರ ಅಪಹರಿಸಿದ 20 ಪ್ರಕರಣಗಳು ನಡೆದಿದ್ದು, ಈ ಪೈಕಿ 13 ಪ್ರಕರಣಗಳಲ್ಲಿ ಕೀಯೂರು ಚೆರಿಯಪಳ್ಳ ನಿವಾಸಿ ಶಮ್ನಾಸ್‌ ಮಂಜಿಲ್‌ನ ಮೊಹಮ್ಮದ್‌ ಶಮ್ನಾಸ್‌ ಯಾನೆ ಶಮ್ನಾಸ್‌ (30) ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಈತನನ್ನು ಮೇಲ್ಪರಂಬ ಡಿವೈಎಸ್‌ಪಿ ಸಿ.ಕೆ.ಸುನಿಲ್‌ ಕುಮಾರ್‌ ನೇತೃತ್ವದ ವಿಶೇಷ ಪೊಲೀಸರು ಬಂಧಿಸಿದ್ದಾರೆ. ಕಳವುಗೈದ ಚಿನ್ನವನ್ನು ಕಾಸರಗೋಡು, ಎರ್ನಾಕುಳಂ ಮತ್ತು ಸುಳ್ಯದಲ್ಲಿ ಮಾರಾಟ ಮಾಡಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next