Advertisement

Kasaragod ಕಳವಿಗೆ ಸಂಚು: 11 ಜನರ ಬಂಧನ

12:11 AM Jul 20, 2024 | Team Udayavani |

ಕಾಸರಗೋಡು: ನಗರಗಳನ್ನು ಕೇಂದ್ರೀಕರಿಸಿ ಕಳವಿಗೆ ಸ್ಕೆಚ್‌ ಹಾಕಿಕೊಂಡಿದ್ದ ಕಾಸರ ಗೋಡಿನ 9 ಮಂದಿ ಸಹಿತ 11 ಜನರನ್ನು ಕೊಯಮತ್ತೂರಿನಿಂದ ಕುನಿಯಾ ಮುತ್ತೂರು ಪೊಲೀಸರು ಬಂಧಿಸಿದ್ದಾರೆ.

Advertisement

ಬೆಂಗಳೂರು ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಕಣ್ಣೂರಿನ ತಡಿಯಂಡೆ ವೀಡ್‌ ನಸೀರ್‌ನ ಸಹೋದರ ಕಣ್ಣೂರು ತಯ್ಯಿಲ್‌ ನಿವಾಸಿ ಎಂ.ಶಮಾಲ್‌ (46), ಹೊಸದುರ್ಗ ಚೆಟ್ಟಿಕುಂಡಂ ಕಡವತ್ತ್ ವೀಟಿಲ್‌ ಮೊಹಮ್ಮದ್‌ ನಿಯಾಸುದ್ದೀನ್‌ (40), ಹೊಸದುರ್ಗ ಕೋಳಾವಯಲ್‌ನ ಸುನಿಲ್‌ (45), ಹೊಸದುರ್ಗ ತೆಕ್ಕೇಪುರದ ಸಮೀರ್‌ (32), ತೃಕ್ಕರಿಪುರ ಮಂಗಳಂ ಗಣಪತಿ ಪಾಳಯಂನ ಫರ್ಸಾದ್‌ (25), ಅನಸ್‌ (25), ಉಕ್ಕಟ್ಟಂ ವಿನ್ಸೆಂಟ್‌ ರಸ್ತೆಯ ಮೊಹಮ್ಮದ್‌ ಅನಸ್‌ (29), ತೃಕ್ಕರಿಪುರ ಮಂಗಳಂ ಪೆರಿಯಾ ಪಳ್ಳಿವಾಸಲ್‌ ನಿವಾಸಿಗಳಾದ ಸಲೀಂ ಮಾಲಿಕ್‌ (25), ಶಾಜಹಾನ್‌ (26), ತೃಕ್ಕರಿಪುರ ಕಕ್ಕೆಯಂ ನಿವಾಸಿ ಮೊಹಮ್ಮದ್‌ ಯಾಸಿನ್‌ (18), ಕಣ್ಣೂರು ವಾಳìವೀಥಿ ತಾಕಯತ್‌ ಅಬ್ದುಲ್‌ ಹಲೀಂ (47) ಮತ್ತು ಭಟ್ಕಳ ನಿವಾಸಿ ನೌಫಲ್‌ ಖಾಸಿಂ ಶೇಖ್‌ (29) ಬಂಧಿತರು. ಇವರು ಕೊಯಮತ್ತೂರಿನ ಕೂವ್ವೆ ಪುತುರಿಯ ಮನೆಯೊಂದರಲ್ಲಿ ಠಿಕಾಣಿ ಹೂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next