Advertisement

Kasaragod: ಐದು ವರ್ಷಗಳ ಹಿಂದೆ ನಡೆದ ಮಹಿಳೆಯ ಕೊಲೆ : ಮೃತದೇಹಕ್ಕಾಗಿ ಶೋಧ ಆರಂಭ

12:16 AM Feb 02, 2024 | Team Udayavani |

ಕಾಸರಗೋಡು: ಐದು ವರ್ಷಗಳ ಹಿಂದೆ ಕೊಲೆಗೈಯ್ಯಲ್ಪಟ್ಟ ಮಹಿಳೆಯ ಮೃತದೇಹ ಪತ್ತೆಹಚ್ಚಲು ಈ ಹಿಂದೆ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆ ವಿಫಲಗೊಂಡ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬದಿಗಿರಿಸಲಾಗಿದ್ದ ಶೋಧ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಿದ್ದಾರೆ.

Advertisement

ಮೂಲತಃ ಕೊಲ್ಲಂ ಇರವಿಪುರಂ ವಾಳತ್ತಿಂಗಲ್‌ ವೇಳೆ ವೀಟಿಲ್‌ನ ಪ್ರಮೀಳಾ (30) ಅವರ ಮೃತದೇಹ ಪತ್ತೆ ಕಾರ್ಯಾಚರಣೆಗೆ ಮತ್ತೆ ಮರುಜೀವ ನೀಡಲಾಗಿದೆ. ಪ್ರಮೀಳ ಪತಿ ಮೂಲತ: ತಳಿಪರಂಬ ಆಲಕ್ಕೋಡು ನಿವಾಸಿ ಸೆಲ್ವರಾಜ್‌ನೊಂದಿಗೆ ಕಾಸರಗೋಡು ವಿದ್ಯಾನಗರದ ಪನ್ನಿಪ್ಪಾರೆಯ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಈ ಹಿಂದೆ ವಾಸಿಸುತ್ತಿದ್ದರು. 2019 ಸೆಪ್ಟಂಬರ್‌ 19ರಂದು ರಾತ್ರಿ ಪ್ರಮೀಳಾ ಮತ್ತು ಪತಿಯ ಮಧ್ಯೆ ಜಗಳ ಉಂಟಾಗಿತ್ತು. ಇಬ್ಬರು ಮಕ್ಕಳೊಂದಿಗೆ ಪನ್ನಿಪ್ಪಾರೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಪ್ರಮೀಳ ಆ ಬಳಿಕ ದಿಢೀರ್‌ ಆಗಿ ನಾಪತ್ತೆಯಾಗಿದ್ದರು. ಪತ್ನಿ ನಾಪತ್ತೆಯಾದ ಬಗ್ಗೆ ಸೆಲ್ವರಾಜ್‌ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next