Advertisement

Kasaragod Crime News: ಕಾಸರಗೋಡು ಅಪರಾಧ ಸುದ್ದಿಗಳು

10:30 PM Oct 17, 2023 | Team Udayavani |

ಗಾಂಜಾ ಸಾಗಾಟ: ಪರಾರಿಯಾದ ಆರೋಪಿ ಸೆರೆ
ಮಂಜೇಶ್ವರ: ಕಾರಿನಲ್ಲಿ 90 ಕಿಲೋ ಗಾಂಜಾ ಸಾಗಾಟ ನಡೆಸಿದ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿ ಪಳಯಂಗಡಿ ನಿವಾಸಿ ರಿಯಾಸ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಅ. 15ರಂದು ರಾತ್ರಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಬಾಯಿಕಟ್ಟೆಯಿಂದ ಗಾಂಜಾ ವಶಪಡಿಸಲಾಗಿತ್ತು. ಆರೋಪಿ ರಿಯಾಸ್‌ ಪರಾರಿಯಾಗಿದ್ದ. ಈ ಪ್ರಕರಣದಲ್ಲಿ ಮುಖ್ಯ ಆರೋಪಿ ಕೂತುಪರಂಬ ಕಣ್ಣವಂ ನಿವಾಸಿ ರೈಫ್‌ ಬಶೀರ್‌ನನ್ನು ಬಂಧಿಸಲಾಗಿತ್ತು.
**
ಸಂಚರಿಸುತ್ತಿದ್ದ ಸ್ಕೂಟರ್‌ಗೆ ಬೆಂಕಿ
ಹೊಸದುರ್ಗ: ಸಂಚರಿಸುತ್ತಿದ್ದ ಸ್ಕೂಟರ್‌ಗೆ ಬೆಂಕಿ ಹತ್ತಿಕೊಂಡ ಘಟನೆ ಕಾಂಞಂಗಾಡ್‌ನ‌ ಇಕ್ಬಾಲ್‌ ನಗರದಲ್ಲಿ ನಡೆದಿದೆ. ಸ್ಕೂಟರ್‌ ಬೆಂಕಿಗಾಹುತಿಯಾಗಿದೆ. ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ ಸ್ಕೂಟರ್‌ ಸವಾರ ನಿಯಾದ್‌ ಸ್ಕೂಟರನ್ನು ನಿಲ್ಲಿಸಿ ಇಳಿದುದರಿಂದ ಅಪಾಯದಿಂದ ಪಾರಾದರು. ಸ್ಥಳೀಯರು ಬೆಂಕಿಯನ್ನು ಆರಿಸಿದರು.
**
ಪೆಟ್ರೋಲ್‌ ಬಂಕ್‌ ನೌಕರನಿಗೆ ಹಲ್ಲೆ
ಉಪ್ಪಳ: ಉಪ್ಪಳದ ಮೆಹಬೂಬ್‌ ಪೆಟ್ರೋಲ್‌ ಬಂಕ್‌ನ ನೌಕರ ಪೆರಿಯಡ್ಕದ ಸಜೇಶ್‌ (35) ಅವರಿಗೆ ಹಲ್ಲೆಗೈದ ಘಟನೆ ನಡೆದಿದೆ. ವಾಹನಕ್ಕೆ ಪೆಟ್ರೋಲ್‌ ತುಂಬಿಸುವ ವಿಷಯದಲ್ಲಿ ವಾಗ್ವಾದ ನಡೆದು ನೌಕರನಿಗೆ ಪಿಕಪ್‌ ಚಾಲಕ ಹಲ್ಲೆ ಮಾಡಿದ್ದಾಗಿ ದೂರು ನೀಡಲಾಗಿದೆ. ಇದರಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.
**
ಯುವಕನಿಗೆ ಹಲ್ಲೆಗೈದು ಬೈಕ್‌ ಅಪಹರಣ
ಕಾಸರಗೋಡು: ಪಡನ್ನಕ್ಕಾಡ್‌ ಅಂದವಪ್ಪಣ ಕರುವಳದ ಬಿ.ಎಸ್‌.ಹನೀಫ (52) ಅವರಿಗೆ ಹಲ್ಲೆಗೈದು ಬೈಕ್‌ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕರುವಳ ನಿವಾಸಿಗಳಾದ ಶ್ರೀಹರಿ, ನಾಸರ್‌ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಅ.16 ರಂದು ರಾತ್ರಿ 10.45 ಕ್ಕೆ ಬೈಕ್‌ ಅಪಹರಿಸಲಾಗಿದೆ.

ಇದನ್ನೂ ಓದಿ: Bengaluru: ಮಾಜಿ ಪ್ರಿಯಕನ ಹತ್ಯೆಗೈದು ಗಲ್ಲಿಯಲ್ಲಿ ಶವ ಎಸೆದ ದಂಪತಿ ಸೆರೆ

Advertisement

Udayavani is now on Telegram. Click here to join our channel and stay updated with the latest news.

Next