Advertisement

Kasaragod ಚೀಮೇನಿ: ಬಾಲಕರಿಬ್ಬರು ನೀರುಪಾಲು

11:27 PM Jun 17, 2024 | Team Udayavani |

ಕಾಸರಗೋಡು: ಚೀಮೇನಿ ಕನಿಯಾಂತೋಲ್‌ನಲ್ಲಿ ನೀರು ತುಂಬಿದ್ದ ಕಲ್ಲಿನ ಕೋರೆಯಲ್ಲಿ ಮುಳುಗಿ ಬಾಲಕರಿಬ್ಬರು ಸಾವಿಗೀಡಾದ ಘಟನೆ ಸೋಮವಾರ ಸಂಜೆ 6.30ಕ್ಕೆ ಸಂಭವಿಸಿದೆ.

Advertisement

ಕನಿಯಾಂತೋಲಿಲ್‌ ರಾಧಾಕೃಷ್ಣನ್‌ – ಪುಷ್ಪಾ ದಂಪತಿಯ ಅವಳಿ ಮಕ್ಕಳಾದ ಸುದೇವ್‌ ಮತ್ತು ಶ್ರೀದೇವ್‌ ಮೃತಪಟ್ಟವರು. ಅವರು ಮನೆ ಸಮೀಪದ ಕೋರೆಯಲ್ಲಿ ಆಟವಾಡುತ್ತಿದ್ದಾಗ ದುರಂತ ಸಂಭವಿಸಿದೆ.

ಬಾಲಕರು ಚೀಮೇನಿ ಹೈಯರ್‌ ಸೆಕೆಂಡರಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿಗಳಾಗಿದ್ದರು. ಮೃತದೇಹವನ್ನು ಪರಿಯಾರಂನ ಕಣ್ಣೂರು ಸರಕಾರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next