Advertisement

Kasaragod ಪತ್ನಿಯ ಕೊಂದಾತನಿಗೆ ಜೀವಾವಧಿ ಸಜೆ

12:07 AM Jun 22, 2024 | Team Udayavani |

ಕಾಸರಗೋಡು: ಹಾಡಹಗಲೇ ಮನೆಯೊಳಗೆ ಕುತ್ತಿಗೆ ಬಿಗಿದು ಪತ್ನಿಯನ್ನು ಕೊಲೆಗೈದ ಪ್ರಕರಣದಲ್ಲಿ ಪತಿಗೆ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ (ಪ್ರಥಮ) ಜೀವಾವಧಿ ಸಜೆ ಹಾಗೂ 3 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ದಂಡ ಪಾವತಿಸದಿದ್ದಲ್ಲಿ ಎರಡು ವರ್ಷ ಹೆಚ್ಚುವರಿಯಾಗಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ.

ಸುಶೀಲಾ (45) ಅವರನ್ನು ಕೊಂದಿರುವ ಪೆರ್ಲ ಕೆ.ಕೆ.ರೋಡ್‌ನ‌ ಅಜಿಲಡ್ಕದ ಜನಾರ್ದನ(50) ಶಿಕ್ಷೆಗೆ ಒಳಗಾದವನು. 2020ರ ಸೆ.7ರಂದು ಮಧ್ಯಾಹ್ನ 3 ಗಂಟೆಗೆ ಕೊಲೆ ನಡೆದಿತ್ತು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.

ಉಪ್ಪಳ: ಫ್ಲ್ಯಾಟ್‌ನಲ್ಲಿಕೊಳೆತ ಶವ ಪತ್ತೆ
ಕಾಸರಗೋಡು: ಉಪ್ಪಳ ಬಸ್‌ ನಿಲ್ದಾಣ ಬಳಿಯ ಫ್ಲ್ಯಾಟೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪ ತ್ತೆಯಾಗಿದೆ. ದುರ್ವಾಸನೆ ಬೀರುತ್ತಿದ್ದ ಹಿನ್ನೆಲೆಯಲ್ಲಿ ಫ್ಲಾಟ್‌ನ ನಿವಾಸಿಗಳು ನೋಡಿದಾಗ ಬಾತ್‌ ರೂಂನಲ್ಲಿ ಮೃತದೇಹ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇಲ್ಲಿ ಪೊಸೋಟು ನಿವಾಸಿ ಶೇಖ್‌ ಇಬ್ರಾಹಿಂ (46) ಹಾಗೂ ಕುಟುಂಬ ವಾಸಿಸುತ್ತಿದೆ.

Advertisement

ಕುಟುಂಬದವರು ಬಕ್ರೀದ್‌ ಹಿನ್ನೆಲೆ ಯಲ್ಲಿ ಊರಿಗೆ ತೆರಳಿದ್ದು, ಇಬ್ರಾಹಿಂ ಒಬ್ಬರೇ ಫ್ಲ್ಯಾಟ್‌ನಲ್ಲಿದ್ದರೆಂದು ತಿಳಿದು ಬಂದಿದೆ. ಪತ್ನಿ ಮನೆ ವಾಮಂಜೂರಿನಲ್ಲಿದೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next