Advertisement

Kasaragod ಕುವೈಟ್‌ ಅಗ್ನಿ ದುರಂತ: ಪಾರ್ಥಿವ ಶರೀರ ಮನೆಗೆ

12:41 AM Jun 15, 2024 | Team Udayavani |

ಕಾಸರಗೋಡು: ಕುವೈಟ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವಿಗೀಡಾದ ಚೆರ್ಕಳ ಕುಂಡಡ್ಕದ ರವೀಂದ್ರನ್‌-ರಮಣಿ ದಂಪತಿ ಪುತ್ರ ಕೆ. ರಂಜಿತ್‌ (34) ಅವರ ಪಾರ್ಥಿವ ಶರೀರವನ್ನು ಕೊಚ್ಚಿ ವಿಮಾನ ನಿಲ್ದಾಣದಿಂದ ಆ್ಯಂಬುಲೆನ್ಸ್‌ನಲ್ಲಿ ಶುಕ್ರವಾರ ರಾತ್ರಿ ಮನೆಗೆ ತರಲಾಯಿತು.

Advertisement

ಜಿಲ್ಲಾಧಿಕಾರಿ ಕೆ. ಇಂಬುಶೇಖರ್‌ ಗೌರವ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು. ಶಾಸಕ ಎನ್‌.ಎ.ನೆಲ್ಲಿಕುನ್ನು, ಶಾಸಕ ಸಿ. ಎಚ್‌. ಕುಂಞಂಬು, ಬಿಜೆಪಿ ಮುಖಂಡ ಅಬ್ದುಲ್ಲ ಕುಟ್ಟಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಅಂತಿಮ ನಮನ ಸಲ್ಲಿಸಿದರು.

ಸೌತ್‌ ತೃಕ್ಕರಿಪುರ ತೆಕ್ಕುಂಬಾಟ್‌ ಕುಂಞಿ ಕೇಳು ಅವರ ಪಾರ್ಥಿವ ಶರೀರವನ್ನು ಕೊಚ್ಚಿ ವಿಮಾನ ನಿಲ್ದಾಣದಿಂದ ಆ್ಯಂಬುಲೆನ್ಸ್‌ನಲ್ಲಿ ಮನೆಗೆ ತರಲಾಯಿತು. ಜಿಲ್ಲಾಧಿಕಾರಿ ಕೆ. ಇಂಬುಶೇಖರ್‌ ಗೌರವ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು.

ಇದೇ ವೇಳೆ ಅಗ್ನಿ ದುರಂತದಲ್ಲಿ ಗಾಯಗೊಂಡ ಕಾಂಞಂಗಾಡ್‌ ಒಳವರದ ನಳಿನಾಕ್ಷ ಅವರ ಮನೆಗೆ ಜಿಲ್ಲಾಧಿಕಾರಿ ಇಂಬುಶೇಖರ್‌ ಭೇಟಿ ನೀಡಿ ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next