Advertisement

Kasaragod: ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಮಗುವಿನ ಸಾವು

09:22 PM Sep 22, 2024 | Team Udayavani |

ಕಾಸರಗೋಡು: ನೀರು ತುಂಬಿದ್ದ ಬಕೆಟ್‌ನಲ್ಲಿ ಮುಳುಗಿ ಮಗುವೊಂದು ಸಾವಿಗೀಡಾದ ದಾರುಣ ಘಟನೆ ಮಂಜೇಶ್ವರದ ಕಡಂಬಾರ್‌ನಲ್ಲಿ ನಡೆದಿದೆ.

Advertisement

ಮಂಜೇಶ್ವರ ಕಡಂಬಾರ್‌ನ ಕೆ.ಎ.ಹಾರೀಸ್‌ – ಖೈರುನ್ನೀಸಾ ದಂಪತಿಗಳ ಪುತ್ರಿ, ಒಂದು ವರ್ಷ ಎರಡು ತಿಂಗಳು ಪ್ರಾಯದ ಫಾತ್ವಿಮ ಸಾವಿಗೀಡಾಗಿದೆ.

ಮನೆಯವರು ಹೊರಗಿನ ಕೊಠಡಿಯಲ್ಲಿದ್ದು, ಮಗು ಸ್ನಾನದ ಕೊಠಡಿಗೆ ತೆರಳಿ ನೀರು ತುಂಬಿದ್ದ ಬಕೆಟ್‌ಗೆ ಆಕಸ್ಮಿಕವಾಗಿ ಬಿದ್ದು ಸಾವು ಸಂಭವಿಸಿತು. ಮಗುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next