Advertisement

Kasaragod ಬಸ್‌ ಮಗುಚಿ ಬಿದ್ದು ಚಾಲಕನ ಸಾವು : 20 ಮಂದಿಗೆ ಗಾಯ

12:43 AM Mar 20, 2024 | Team Udayavani |

ಕಾಸರಗೋಡು: ಪೆರಿಯ ಚಾಲಿಂಗಾಲ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸೊಂದು ಮಗುಚಿ ಬಿದ್ದು ಚಾಲಕ ಸಾವಿಗೀಡಾಗಿ, ವಿದ್ಯಾರ್ಥಿಗಳು ಸಹಿತ 20 ಮಂದಿ ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ. ಚಾಲಕ ಮನ್ನಿಪ್ಪಾಡಿ ಧೂಮಾವತಿ ರಸ್ತೆ ನಿವಾಸಿ ಚೇತನ್‌ ಕುಮಾರ್‌ (37) ಸಾವಿಗೀಡಾದರು.

Advertisement

ಮಂಗಳೂರಿನಿಂದ ಕಣ್ಣೂರಿಗೆ ಪ್ರಯಾಣಿಸುತ್ತಿದ್ದಾಗ ಪುಲ್ಲೂರು-ಪೆರಿಯ ಪಂಚಾಯತ್‌ ಕಚೇರಿ ಸಮೀಪದಲ್ಲಿ ಮಗುಚಿ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಅಂಗವಾಗಿ ಟೋಲ್‌ ಬೂತ್‌ ಸ್ಥಾಪಿಸುವ ಅಂಗವಾಗಿ ಚಾಲಿಂಗಾಲ್‌ ಮೊಟ್ಟದಲ್ಲಿ ರಸ್ತೆ ತಿರುವು ನೀಡಲಾಗಿತ್ತು. ಇಲ್ಲಿನ ತಿರುವಿನಲ್ಲಿ ಬಸ್‌ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದು, ಬಸ್ಸಿನಡಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದವರನ್ನು ಅಗ್ನಿಶಾಮಕ ದಳ, ಪೊಲೀಸರು ಹಾಗು ಸ್ಥಳೀಯರು ಸೇರಿ ಮೇಲೆಕ್ಕೆತ್ತಿದ್ದರು. ಸಣ್ಣ ಪುಟ್ಟ ಗಾಯಗೊಂಡ ವಿದ್ಯಾರ್ಥಿಗಳ ಸಹಿತ 20 ಮಂದಿ ಪ್ರಯಾಣಿಕರನ್ನು ಕಾಂಞಂಗಾಡ್‌ನ‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next