Advertisement

Kasaragod ಮಗುವಿನ ಕೊಲೆಗೈದ ತಾಯಿಯ ಬಂಧನ

12:10 AM Oct 07, 2023 | Team Udayavani |

ಕಾಸರಗೋಡು: ಮಗುವನ್ನು ಬಾವಿಗೆಸೆದು ಕೊಲೆಗೈದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಾಗದ ಆರೋಪಿ ತಾಯಿ ಕಾಟುಕುಕ್ಕೆ ಪೆರ್ಲತ್ತಡ್ಕದ ಬಾಬು ಅವರ ಪತ್ನಿ ಶಾರದಾ(28)ಳನ್ನು ನ್ಯಾಯಾಲಯ ಹೊರಡಿಸಿದ ಬಂಧನ ವಾರಂಟ್‌ನಂತೆ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

Advertisement

ಈ ಪ್ರಕರಣದ ವಿಚಾರಣೆ ಸಂದರ್ಭ ನ್ಯಾಯಾಲಯದ ಮುಂದೆ ಸಕಾಲದಲ್ಲಿ ಹಾಜರಾಗಬೇಕೆಂಬ ಷರತ್ತಿನಡಿ ನ್ಯಾಯಾಲಯ ಆಕೆಗೆ ಜಾಮೀನು ನೀಡಿತ್ತು. 2020 ಡಿ. 4ರಂದು ರಾತ್ರಿ ತನ್ನ ಮಗುವನ್ನು ಪೆರ್ಲತ್ತಡ್ಕದ ಬಾವಿಯೊಂದಕ್ಕೆ ಎಸೆದು ಕೊಲೆಗೈದ ಆರೋಪದಂತೆ ಬದಿಯಡ್ಕ ಪೊಲೀಸರು ಶಾರದಾ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಅನಂತರ ಆಕೆಗೆ ನ್ಯಾಯಾಲಯ ಜಾಮೀನು ನೀಡಿತ್ತು. ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(1)ದಲ್ಲಿ ಇತ್ತೀಚೆಗೆ ವಿಚಾರಣೆ ಆರಂಭಗೊಂಡಿತ್ತು. ಆದರೆ ಆರೋಪಿ ಶಾರದಾ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next