Advertisement

Kasaragod; ದಂಪತಿಗೆ ಹಲ್ಲೆ; ಕೇಸು ದಾಖಲು

12:09 AM Feb 15, 2024 | Team Udayavani |

ಕಾಸರಗೋಡು: ಅಕ್ರಮವಾಗಿ ಮನೆಗೆ ನುಗ್ಗಿ ಪಿಲಿಕೋಡು ರಯರಮಂಗಲಂ ಕ್ಷೇತ್ರದ ಸಮೀಪದ ಪಿ.ಕೆ. ಕುಂಞಿಕೃಷ್ಣನ್‌ ಅಡಿಯೋಡಿ(87) ಮತ್ತು ಪತ್ನಿ ರಾಧಾ ಅವರಿಗೆ ಹಲ್ಲೆ ಮಾಡಿ, ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ನೆರೆಮನೆಯ ಕೆ.ವಿ.ಪ್ರಸಾದ್‌, ಪತ್ನಿ ಟಿ.ಪಿ. ಶ್ರೀಲೇಖಾ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

ಕಾಸರಗೋಡು: ನೇಣು ಬಿಗಿದು ಆತ್ಮಹತ್ಯೆ
ಕಾಸರಗೋಡು: ಉದುಮ ಬಸ್‌ ನಿಲ್ದಾಣದಲ್ಲಿ ನಾಲಾಂವಾದುಕಲ್‌ ತಟ್ಟುಮ್ಮಲ್‌ ನಿವಾಸಿ ನಾರಾಯಣನ್‌(62) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ಹಿಂದೆ ಅವರು ಆಟೋ ಚಾಲಕರಾಗಿ ದುಡಿಯುತ್ತಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಸಂಚರಿಸುತ್ತಿದ್ದ ಬೈಕ್‌ ಬೆಂಕಿಗಾಹುತಿ
ಕುಂಬಳೆ: ಸಂಚರಿಸುತ್ತಿದ್ದ ಬೈಕ್‌ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ನಾಯ್ಕಪುವಿನ ರವಿ ಅವರ ಬೈಕ್‌ ಬೆಂಕಿಗಾಹುತಿಯಾಗಿದೆ. ಫೆ. 13ರಂದು ರಾತ್ರಿ 11 ಗಂಟೆಗೆ ರವಿ ಹಾಗೂ ಪುತ್ರ ಕುಂಬಳೆಯಿಂದ ಮನೆಗೆ ಮರಳುತ್ತಿದ್ದಾಗ ಭಾಸ್ಕರ ನಗರಕ್ಕೆ ತಲುಪಿದಾಗ ಆಫ್‌ ಆಗಿದೆ. ಸ್ಟಾರ್ಟ್‌ ಮಾಡಲೆತ್ನಿಸಿದಾಗ ಬೆಂಕಿ ಹತ್ತಿಕೊಂಡಿತು. ಕೂಡಲೇ ಬೈಕ್‌ನಿಂದ ಇವರು ಇಳಿದುದರಿಂದ ಸಂಭವನೀಯ ಅಪಾಯ ತಪ್ಪಿತು.

 

Advertisement

Udayavani is now on Telegram. Click here to join our channel and stay updated with the latest news.

Next