Advertisement

Kasaragod 7 ಲಕ್ಷ ರೂ. ಕಾಳಧನ ವಶ: ಇಬ್ಬರು ಬಂಧನ

11:35 PM Dec 01, 2023 | Team Udayavani |

ಕಾಸರಗೋಡು: ನಗರದ ಎರಡು ಕಡೆಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಏಳು ಲಕ್ಷ ರೂ. ಕಾಳಧನ ಸಹಿತ ಇಬ್ಬರನ್ನು ಬಂಧಿಸಿದ್ದಾರೆ.

Advertisement

ಕಾಸರಗೋಡು ತಳಂಗರೆ ಪಳ್ಳಿಕ್ಕಾಲ್‌ನ ಪಿ.ಎ.ಬಿಲಾಲ್‌(40) ಮತ್ತು ಬಾಡೂರು ಕಂದಲ್‌ ದರ್ಹಾ ಹೌಸ್‌ನ ಅಬ್ದುಲ್‌ ರಹ್ಮಾನ್‌ ಡಿ(47)ನನ್ನು ಕಾಸರಗೋಡು ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ.

ಅಬ್ದುಲ್‌ ರಹ್ಮಾನ್‌ನನ್ನು ನೆಲ್ಲಿಕುಂಜೆ ರಸ್ತೆಯ ಗೀತಾ ಟಾಕೀಸ್‌ ಜಂಕ್ಷನ್‌ ಮುಂಭಾಗದಿಂದ ಬಂಧಿಸಿ 3,08,000 ರೂ. ವಶಪಡಿಸಿಕೊಳ್ಳಲಾಗಿದೆ. ಪಳ್ಳಿಕ್ಕಾಲ್‌ನ ಬಿಲಾಲ್‌ನನ್ನು ತಾಯಲಂಗಾಡಿಯ ಎಟಿಎಂ ಸಮೀಪದಿಂದ ಬಂಧಿಸಿ 4 ಲಕ್ಷ ರೂ. ವಶಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next