Advertisement

Kasaragod 1.8 ಕೋ.ರೂ. ಚಿನ್ನ ಸಾಗಾಟ: ಇಬ್ಬರ ಸೆರೆ

11:58 PM Oct 11, 2023 | Team Udayavani |

ಕಾಸರಗೋಡು: ಡಿಆರ್‌ಐ ನೀಡಿದ ರಹಸ್ಯ ಮಾಹಿತಿಯಿಂತೆ ಕಣ್ಣೂರು ವಿಮಾನ ನಿಲ್ದಾಣದಿಂದ 1.8 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನವನ್ನು ಕಸ್ಟಂಸ್‌ ದಳ ವಶಪಡಿಸಿಕೊಂಡಿದೆ.

Advertisement

ಆರೋಪಿಗಳಾದ ಕಾಸರಗೋಡು ನಿವಾಸಿ ಅಬ್ದುಲ್‌ ನಿಶಾರ್‌, ಬಡಗರ ನಿವಾಸಿ ಮುಹಮ್ಮದ್‌ನನ್ನು ಬಂಧಿಸಲಾಗಿದೆ.
ಶಾರ್ಜಾದಿಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಬಂದಿಳಿದ ಅಬ್ದುಲ್‌ ನಿಶಾರ್‌ನಿಂದ 63.39 ಲಕ್ಷ ರೂ. ಮೌಲ್ಯದ 1080 ಗ್ರಾಂ ಚಿನ್ನವನ್ನು, ಅಬುಧಾಬಿಯಿಂದ ಬಂದ ಮಹಮೂದ್‌ನಿಂದ 37.49 ಲಕ್ಷ ರೂ. ಮೌಲ್ಯದ 739 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

ವೀಸಾ ಭರವಸೆ ನೀಡಿ ವಂಚನೆ
ಲಕ್ಷಾಂತರ ರೂ. ಪಡೆದು ಪರಾರಿ
ಕಾಸರಗೋಡು: ವೀಸಾ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಹಾಗೂ ಪಾಸ್‌ಪೋರ್ಟ್‌ ಲಪಟಾಯಿಸಿ ಪರಾರಿಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಈ ಸಂಬಂಧ ಹಣ ಕಳೆದುಕೊಂಡ ಪರಪ್ಪ ಕ್ಲಾಯಿಕ್ಕೋಡ್‌ನ‌ ಜಮೀಲ ಅವರು ನೀಡಿದ ದೂರಿನಂತೆ ಕ್ಲಾಯಿಕ್ಕೋಡ್‌ನ‌ ಅಬ್ದುಲ್‌ ರೌಫ್‌ ವಿರುದ್ಧ ವೆಳ್ಳರಿಕುಂಡ್‌ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next