Advertisement

ಉಪೇಂದ್ರ ಜೊತೆ “ಕರ್ವ’ನವನೀತ್‌ ಚಿತ್ರ

10:44 AM Sep 17, 2019 | Lakshmi GovindaRaju |

ಉಪೇಂದ್ರ ಈಗ ಮೆಲ್ಲನೆ ಒಂದರ ಮೇಲೊಂದು ಸಿನಿಮಾಗಳಲ್ಲಿ ಬಿಝಿ ಆಗುತ್ತಿದ್ದಾರೆ. ಅತ್ತ “ಐ ಲವ್‌ ಯು’ ಹಿಟ್‌ ಆಗುತ್ತಿದ್ದಂತೆಯೇ, ಆರ್‌.ಚಂದ್ರು ಜೊತೆಗೆ ಮತ್ತೊಂದು ಹೊಸ ಸಿನಿಮಾ ಅನೌನ್ಸ್‌ ಮಾಡಿದರೆ, ಇತ್ತ, ನಿರ್ಮಾಪಕ ತರುಣ್‌ ಶಿವಪ್ಪ ಅವರೊಂದಿಗೂ ಹೊಸ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಹೌದು, ಉಪೇಂದ್ರ ಅವರ ಹೊಸ ಚಿತ್ರವನ್ನು ತರುಣ್‌ ಶಿವಪ್ಪ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ನವನೀತ್‌ ನಿರ್ದೇಶನ ಮಾಡುತ್ತಿದ್ದಾರೆ.

Advertisement

ಈ ಹಿಂದೆ “ಕರ್ವ’ ಸಿನಿಮಾ ಮಾಡಿದ್ದ ನವನೀತ್‌, ಈಗ ಉಪೇಂದ್ರ ಅವರಿಗಾಗಿಯೇ ಹೊಸ ಬಗೆಯ ಕಥೆ ಹೆಣೆದಿದ್ದಾರೆ. ಕಥೆಯನ್ನು ಕೇಳಿದ ಉಪೇಂದ್ರ, ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ತರುಣ್‌ ಶಿವಪ್ಪ ಅವರ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಐದನೇ ಸಿನಿಮಾ ಇದು. ಹಾಗಾಗಿ, ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಲು ನಿರ್ಮಾಪಕ ತರುಣ್‌ ಶಿವಪ್ಪ ಪ್ಲಾನ್‌ ಮಾಡಿದ್ದಾರೆ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದ್ದು, ಉಪೇಂದ್ರ ಅವರ ಶೈಲಿಯ ಮತ್ತೊಂದು ಸಿನಿಮಾ ಎಂಬುದು ಅವರ ಮಾತು.

ನಿರ್ದೇಶಕರು ಈ ಬಾರಿ ಹೊಸ ಜಾನರ್‌ ಆಯ್ಕೆ ಮಾಡಿಕೊಂಡಿದ್ದು, ಉಪೇಂದ್ರ ಮೂಲಕ ಹೊಸ ವಿಷಯವನ್ನು ಹೇಳಲು ಹೊರಟಿದ್ದಾರೆ. ಅದೊಂದು ವಿಶೇಷ ಕಥೆ ಆಗಿರುವುದರಿಂದಲೇ ಸಿನಿಮಾ ನಿರ್ಮಾಣ ಮಾಡಲು ಒಪ್ಪಿದ್ದಾಗಿ ಹೇಳುವ ತರುಣ್‌ ಶಿವಪ್ಪ, ಚಿತ್ರದ ಶೀರ್ಷಿಕೆ ಹಾಗೂ ಫ‌ಸ್ಟ್‌ ಲುಕ್‌ ಅನ್ನು, ಉಪೇಂದ್ರ ಅವರ ಹುಟ್ಟುಹಬ್ಬದ (ಸೆ.18) ದಿನದಂದು ಅನೌನ್ಸ್‌ ಮಾಡಲು ತಯಾರಿ ನಡೆಸುತ್ತಿರುವುದಾಗಿ ಹೇಳುತ್ತಾರೆ. ಸದ್ಯಕ್ಕೆ ತರುಣ್‌ ಶಿವಪ್ಪ ಅವರು ಚಿರಂಜೀವಿ ಸರ್ಜಾ ಅಭಿನಯದ “ಖಾಕಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಸಿನಿಮಾ ಬಿಡುಗಡೆಯ ಹೊತ್ತಿಗೆ ಉಪೇಂದ್ರ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

ಉಪ್ಪಿ ಮನವಿ: ಸೆ.18 ಉಪೇಂದ್ರ ಅವರ ಹುಟ್ಟುಹಬ್ಬ. ಹುಟ್ಟುಹಬ್ಬದಂದು ಅಭಿಮಾನಿಗಳು ಕೇಕ್‌, ಹಾರ ತರೋದು ಸಹಜ. ಆದರೆ, ಉಪೇಂದ್ರ ಅಭಿಮಾನಿಗಳಲ್ಲಿ ಕೇಕ್‌, ಹಾರ ಬದಲು ಗಿಡಗಳನ್ನು ತನ್ನಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಉಪೇಂದ್ರ, “ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ…ಸೆಪ್ಟೆಂಬರ್‌ 18 ಅಭಿಮಾನಿಗಳ ದಿನ. ಅಂದು ದಯವಿಟ್ಟು ತಾವುಗಳು ಯಾರೂ ಕೇಕ್‌, ಹೂವಿನ ಹಾರ ಹೂಗುತ್ಛ ಮತ್ತು ಉಡುಗೊರೆಗಳನ್ನು ತರಬೇಡಿ… ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ…’ ಎಂದಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next