Advertisement

ಕಾರ್ತಿಕ ದೀಪೋತ್ಸವ : ಸಾಮೂಹಿಕ ಲಕ್ಷ ಪುಷ್ಪಾರ್ಚನೆ

09:46 AM Nov 13, 2017 | |

ಶಹಾಬಾದ: ಸುಕ್ಷೇತ್ರ ಹೊನಗುಂಟಾದ ಶ್ರೀ ಚಂದ್ರಲಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಟ್ರಸ್ಟ್‌ ಸ್ಥಾಪನೆ ರಜತಮಹೋತ್ಸವ ನಿಮಿತ್ತ ರವಿವಾರ ಮುತ್ತೈದೆಯರಿಂದ ಸಾಮೂಹಿಕ ಲಕ್ಷ ಪುಷ್ಪಾರ್ಚನೆ ಆಯೋಜಿಸಲಾಗಿತ್ತು. ಬೆಳಗ್ಗೆ ಸುಪ್ರಭಾತ, ಅಭಿಷೇಕ, ಮಹಾಪೂಜೆ ನಡೆಯಿತು.

Advertisement

ನಂತರ ದೇವಸ್ಥಾನದ ಸಭಾಂಗಣದಲ್ಲಿ ನೂರಾರು ಜನ ಮುತ್ತೆದೆಯರಿಂದ ದೇವಿಗೆ ಪುಷ್ಪಾರ್ಚನೆ ನಡೆಯಿತು.
ದೇವಸ್ಥಾನದ ಅರ್ಚಕರಾದ ಮಾಣಿಕಪ್ರಭು ಜೋಶಿ, ಋತ್ವಿಜರಾದ ಸುರೇಶ ಜೋಶಿ ಅವರು ಲಕ್ಷ ಪುಷ್ಪಾರ್ಚನೆಯ ಸಂಕಲ್ಪ ಹಾಗೂ ದೇವಿ ನಾಮಾವಳಿ ಪಾರಾಯಣ ಮಾಡಿದರು. ನಂತರ ಮಂಗಳಾರತಿ ಮಾಡಲಾಯಿತು. 

ಮಧ್ಯಾಹ್ನ ಬೆಂಗಳೂರಿನ ಪದ್ಮಾ ಸವಾಯಿ, ವೆಂಕಟೇಶ ಸವಾಯಿ ಅವರಿಂದ ಸಂಗೀತ ಸೇವೆ ನಡೆಯಿತು.
ದೇವಸ್ಥಾನ ಸಮಿತಿಯ ಪ್ರಹ್ಲಾದರಾವ ಕುಲಕರ್ಣಿ, ಗಜಾನನ ಕುಲಕರ್ಣಿ, ಸುರೇಶ ಕುಲಕರ್ಣಿ ರಘೋತ್ತಮ ಸರಾಫ್‌, ಕಾಶೀನಾಥ ಕುಲಕರ್ಣಿ, ಶಾಂತಲಿಂಗ, ಮಾರ್ಥಂಡಪ್ಪ ಬುರಲಿ, ಶ್ರೀಧರ ಕುಲಕರ್ಣಿ, ಎಂ. ಆರ್‌. ಕುಲಕರ್ಣಿ, ಶಾಂತಲಿಂಗ ಟೆಂಗಳಿ, ಅರ್ಚಕರಾದ ಮಲ್ಹಾಭಟ್ಟ ಜೋಶಿ, ಮಾರ್ಥಂಡ ಭಟ್ಟ ಜೋಶಿ, ಅನಂತ ಜೋಶಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next