Advertisement

ಇಂದಿನಿಂದ ಕರ್ತಾರ್ಪುರ ಓಪನ್‌

09:22 PM Nov 16, 2021 | Team Udayavani |

ನವದೆಹಲಿ: ಪಾಕಿಸ್ತಾನದಲ್ಲಿರುವ ಸಿಖ್‌ ಸಮುದಾಯದ ಪವಿತ್ರ ಕ್ಷೇತ್ರ ಕರ್ತಾರ್ಪುರ ಕಾರಿಡಾರ್‌ ಬುಧವಾರ ಪುನಃ ತೆರೆಯಲಿದೆ.

Advertisement

ನ.17ರಂದು ಗುರು ನಾನಕ್‌ ಅವರ ಜನ್ಮದಿನವಾಗಿದ್ದೂ, ಅದಕ್ಕೂ ಮುನ್ನವೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ “ಸಿಖ್‌ ಸಮುದಾಯದ ತೀರ್ಥಯಾತ್ರಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬುಧವಾರ ಕರ್ತಾರ್ಪುರ್‌ ಕಾರಿಡಾರ್‌ ತೆರೆಯಲಾಗುತ್ತದೆ’ ಎಂದಿದ್ದಾರೆ.

ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಛನ್ನಿ, ಮಾಜಿ ಸಿಎಂ ಕ್ಯಾ.ಅಮರಿಂದರ್‌ ಸಿಂಗ್‌ ಮತ್ತು ಇತರ ಪ್ರಮುಖರು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next