Advertisement

ಮನೀಷ್ ಪಾಂಡೆ ನಾಯಕನ ಆಟ: ಮುಂಬೈ ವಿರುದ್ಧ ರೋಚಕ ಜಯ ಸಾಧಿಸಿದ ಕರ್ನಾಟಕ

04:48 PM Nov 04, 2021 | Team Udayavani |

ಗುವಾಹಟಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಶುಭಾರಂಭ ಮಾಡಿದೆ. ಇಂದು ನಡೆದ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ವಿರುದ್ಧ ಕರ್ನಾಟಕ ತಂಡ 9 ರನ್ ಅಂತರದ ರೋಚಕ ಗೆಲುವು ಸಾಧಿಸಿತು.

Advertisement

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ನಾಯಕ ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ನೆರವಾದರು. ಮೂರನೇ ವಿಕೆಟ್ ಗೆ 149 ರನ್ ಜೊತೆಯಾಟವಾಡಿದ ಪಾಂಡೆ ಮತ್ತು ನಾಯರ್ ತಲಾ ಅರ್ಧಶತಕ ಬಾರಿಸಿ ಮಿಂಚಿದರು. ಮನೀಷ್ 84 ರನ್ ಗಳಿಸಿದರೆ, ಕರುಣ್ 72 ರನ್ ಬಾರಿಸಿದರು.

20 ಓವರ್ ಗಳಲ್ಲಿ ಕರ್ನಾಟಕ ನಾಲ್ಕು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಮುಂಬೈ ಪರ ಮೋಹಿತ್ ಅವಸ್ಥಿ ಮತ್ತು ತುಶಾರ್ ದೇಶಪಾಂಡೆ ತಲಾ ಎರಡು ವಿಕೆಟ್ ಕಿತ್ತರು.

ಇದನ್ನೂ ಓದಿ:ಮುಂದಿನ ನಾಯಕ ಯಾರು? ಇಬ್ಬರ ಹೆಸರು ಸೂಚಿಸಿದ ನೂತನ ಕೋಚ್ ದ್ರಾವಿಡ್

ಗುರಿ ಬೆನ್ನತ್ತಿದ ಮುಂಬೈಗೆ ನಾಯಕ ಅಜಿಂಕ್ಯ ರಹಾನೆ ನೆರವಾದರು. ರಹಾನೆ 54 ಎಸೆತಗಳಲ್ಲಿ 75 ರನ್ ಬಾರಿಸಿದರು. ಉಳಿದಂತೆ ಸಿದ್ದೇಶ್ ಲಾಡ್ 32 ರನ್ ಗಳಿಸಿದರು. ಒಂದು ಹಂತದಲ್ಲಿ 16 ಓವರ್ ನಲ್ಲಿ 129 ರನ್ ಗೆ ಮೂರು ವಿಕೆಟ್ ಕಳೆದುಕೊಂಡು ಸುಭದ್ರವಾಗಿದ್ದ ಮುಂಬೈ ನಂತರ ಸತತ ವಿಕೆಟ್ ಕಳೆದುಕೊಂಡಿರು. ಕೊನೆಯಲ್ಲಿ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡ ಮುಂಬೈ 157 ರನ್ ಮಾತ್ರ ಗಳಿಸಿತು. ಈ ಮೂಲಕ ಕರ್ನಾಟಕ 9 ರನ್ ಗಳ ಜಯ ಸಾಧಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next