Advertisement

ತರಬೇತಿ ವೇಳೆ ಗುಂಡು ತಗುಲಿ ಕರ್ನಾಟಕದ ಯೋಧ ಹುತಾತ್ಮ 

04:21 PM Mar 09, 2019 | Team Udayavani |

ಬೆಳಗಾವಿ: ಪಂಜಾಬ್‌ನಲ್ಲಿ ತರಬೇತಿ ವೇಳೆ ಗುಂಡು ತಗುಲಿ ಕರ್ನಾಟಕದ ಯೋಧರೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

Advertisement

ಮೃತ ಯೋಧ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಚಂದೂರು ಗ್ರಾಮದ ಪ್ರವೀಣ ಪಟ್ಟಣಕುಡೆ(32) ಎನ್ನುವವರಾಗಿದ್ದಾರೆ.

71 ಆರ್ಮಿ ರೆಜಿಮೆಂಟ್‌ನ ಯೋಧರಾಗಿದ್ದ ಪ್ರವೀಣ್‌ ಮಾರ್ಚ್‌ 7 ರಂದು ಗಾಯಗೊಂಡಿದ್ದರು. ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ನಾಳೆ ಸ್ವಗ್ರಾಮಕ್ಕೆ ಅವರ ಪಾರ್ಥೀವ ಶರೀರ ಆಗಮಿಸುವ ಸಾಧ್ಯತೆಗಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next