Advertisement

ಕರ್ನಾಟಕ ಸಂಘ ಮುಂಬಯಿ :ಡಾ|ಭರತ್‌ ಸಹಿತ ನಾಲ್ವರು ಅಭ್ಯರ್ಥಿಗಳಿಗೆ ಜಯ

04:24 PM Jun 18, 2018 | |

ಮುಂಬಯಿ: ಕರ್ನಾಟಕ ಸಂಘ ಮುಂಬಯಿ ಇದರ ಕಾರ್ಯಕಾರಿ ಸಮಿತಿಯ 2018 ರಿಂದ  2021ರ ಸಾಲಿನ ನಾಲ್ಕು ಸ್ಥಾನಕ್ಕಾಗಿ ಚುನಾವಣೆಯು ಜೂ.17ರಂದು ಬೆಳಗ್ಗೆ 10 ರಿಂದ ಅಪರಾಹ್ನ 4.30 ರವರೆಗೆ ಸಂಘದ ಆವರಣದಲ್ಲಿ ಜರಗಿತು. ಈ ಬಾರಿ ನಾಲ್ಕು ಸ್ಥಾನಕ್ಕಾಗಿ 5 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರಲ್ಲಿ ಓಂದಾಸ್‌ ಕಣ್ಣಂಗಾರ್‌  274, ಡಾ| ಭರತ್‌ ಕುಮಾರ ಪೊಲಿಪು   271,  ದುರ್ಗಪ್ಪ ಕೊಟಿಯವರ್‌  255,  ರಾಜೀವ್‌ ನಾಯಕ್‌ – 251 ಮತಗಳನ್ನು ಪಡೆದು ಚುನಾವಣೆಯಲ್ಲಿ ಭರ್ಜರಿಯಾಗಿ ಜಯಗಳಿಸಿದ್ದಾರೆ.  62 ಮತಗಳನ್ನು ಪಡೆದ ಸತೀಶ್‌ ಬಂಗೇರ ಅವರು  ಸೋಲುಂಡಿದ್ದಾರೆ.

Advertisement

ಒಟ್ಟು 309 ಮತಗಳು ಚಲಾವಣೆಯಾಗಿದ್ದು, ಮೂರು ಮತಗಳು ಅಸಿಂಧು ಆಗಿತ್ತು.  ಬೆಳಿಗ್ಗೆಯಿಂದ ಮಳೆ ಸುರಿಯುತ್ತಿದ್ದರೂ ಸದಸ್ಯರು ಆಸಕ್ತಿಯಿಂದ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.  ನಾರಾ ಯಣ ಮೆಂಡನ್‌, ಹರೀಶ್‌ ಹೆಜ್ಮಾಡಿ ಹಾಗೂ ಜಿ. ಟಿ ಆಚಾರ್ಯ ಅವರು ಚುನಾವಣೆಯ ಅಧಿಕಾರಿಗಳಾಗಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next