Advertisement

ಕರ್ನಾಟಕ ಸಂಘ ಕಲ್ಯಾಣ್‌: ಮೇ 3ರಂದು ಮಹಾರಾಷ್ಟ್ರ ದಿನಾಚರಣೆ

02:52 PM May 01, 2019 | Vishnu Das |

 

Advertisement

ಕಲ್ಯಾಣ್‌: ಕರ್ನಾಟಕ ಸಂಘ ಕಲ್ಯಾಣ್‌ ವತಿಯಿಂದ ಮಹಾರಾಷ್ಟ್ರ ದಿನಾಚರಣೆಯು ಮೇ ರಂದು ಸಂಜೆ 5ರಿಂದ ಕಲ್ಯಾಣ್‌ ಪಶ್ಚಿಮದ ಜೋಕರ್‌ ಪ್ಲಾಜಾದ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಮುಖ್ಯ ಅತಿಥಿಯಾಗಿ ಥಾಣೆ ಮಹಾನಗರ ಪಾಲಿಕೆಯ ಮೇಯರ್‌ ಮೀನಾಕ್ಷೀ ಆರ್‌. ಶಿಂಧೆ ಹಾಗೂ ಗೌರವ ಅತಿಥಿಗಳಾಗಿ ಕಲ್ಯಾಣ್‌ನ ಜಾಸ್ಮಿàನ್‌ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಡಾ| ಸುರೇಂದ್ರ ವಿ. ಶೆಟ್ಟಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಡಾ| ಬಿ. ಸಿ. ದಿಘೆ, ಡಾ| ಅರುಣಾ ದಿಘೆ, ಕಲ್ಯಾಣ್‌ ಜನತಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಹೇಮಂತ್‌ ರವಾನಿ, ಕಲ್ಯಾಣ್‌ ನಾಗರಿಕ ವಾರ ಪತ್ರಿಕೆಯ ಸಂಪಾದಕ ಇಲಾ ರವಾರಿ ಇವರನ್ನು ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಸಂಘದ ಅಧ್ಯಕ್ಷೆ ದರ್ಶನಾ ಸೋನಕರ್‌ ಹಾಗೂ ಕೆ. ಎಸ್‌. ಸತೀಶ್‌ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next