Advertisement

ತರೀಕೆರೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ; ಕುರ್ಚಿ ಪುಡಿ, ಪುಡಿ

04:45 PM Jan 01, 2018 | Team Udayavani |

ಚಿಕ್ಕಮಗಳೂರು:ಮಾಜಿ ಶಾಸಕ ಸುರೇಶ್ ಹಾಗೂ ಗೋಪಿಕೃಷ್ಣ ಬಣದ ಬಿಜೆಪಿ ಕಾರ್ಯಕರ್ತರೇ ಕೈ, ಕೈ ಮಿಲಾಯಿಸಿಕೊಂಡು, ಬಿಜೆಪಿ ಪರಿವರ್ತನಾ ಸಮಾವೇಶಕ್ಕೆ ಹಾಕಲಾಗಿದ್ದ ಕುರ್ಚಿಗಳನ್ನು ಪುಡಿಗೈದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತರೀಕೆರೆಯಲ್ಲಿ ನಡೆಯುವ ಮೂಲಕ ಟಿಕೆಟ್ ಆಕಾಂಕ್ಷಿಗಳ ಜಗಳ ಬೀದಿಗೆ ಬಂದಂತಾಗಿದೆ.

Advertisement

ಬಿಜೆಪಿ ಪರಿವರ್ತನಾ ಸಮಾವೇಶಕ್ಕೆ ಗೋಪಿಕೃಷ್ಣ ಅವರು ಹಾಕಿಸಿದ್ದ ಫ್ಲೆಕ್ಸ್ ಅನ್ನು ಭಾನುವಾರ ರಾತ್ರಿ ಹರಿದು ಹಾಕಲಾಗಿತ್ತು. ಇದರಿಂದ ರೊಚ್ಚಿಗೆದ್ದ ಗೋಪಿಕೃಷ್ಣ ಬೆಂಬಲಿಗರು ಸೋಮವಾರ ಪರಿವರ್ತನಾ ಸಮಾವೇಶಕ್ಕೆ ಹಾಕಲಾಗಿದ್ದ ಕುರ್ಚಿಗಳನ್ನು ಪುಡಿಗೈದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಳೆ ತರೀಕೆರೆಯಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶ ನಡೆಯಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಆಗಮಿಸಲಿದ್ದಾರೆ. ಏತನ್ಮಧ್ಯೆ ಮಾಜಿ ಶಾಸಕ ಸುರೇಶ್ ಹಾಗೂ ಗೋಪಿಕೃಷ್ಣ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಸುರೇಶ್ ಹಾಗೂ ಗೋಪಿಕೃಷ್ಣ ಅವರು ಪರಿವರ್ತನಾ ಸಮಾವೇಶಕ್ಕೆ ಶುಭ ಹಾರೈಸಿ ಫ್ಲೆಕ್ಸ್ ಹಾಕಿಸಿದ್ದರು. ಆದರೆ ನಿನ್ನೆ ರಾತ್ರಿ ಗೋಪಿಕೃಷ್ಣ ಅವರ ಫ್ಲೆಕ್ಸ್ ಅನ್ನು ಹರಿದು ಹಾಕುವ ಮೂಲಕ ಬಿಜೆಪಿ ಕಲಹ ಸ್ಫೋಟಗೊಂಡಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next