Advertisement

Karnataka Poll: ಇಂದು ಕೋಲಾರಕ್ಕೆ ರಾಹುಲ್‌ ಗಾಂಧಿ

01:00 AM Apr 16, 2023 | Team Udayavani |

ಕೋಲಾರ: ಚುನಾವಣೆಗೆ 24 ದಿನಗಳಷ್ಟೇ ಬಾಕಿ ಇದ್ದು, ಎರಡು ದಿನಗಳ ಪ್ರವಾಸಕ್ಕಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ರವಿವಾರ ರಾಜ್ಯಕ್ಕೆ ಆಗಮಿಸುವರು.

Advertisement

ಕೋಲಾರದಲ್ಲಿ ನಡೆಯುವ ಕಾಂಗ್ರೆಸ್‌ ಜೈ ಭಾರತ್‌ ಸಮಾ ವೇಶದಲ್ಲಿ ಭಾಗಿಯಾಗಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಪ್ರಚಾರದ ರಣಕಹಳೆ ಮೊಳಗಿಸುವರು. ಸೋಮವಾರ ಬೀದರ್‌ನಲ್ಲಿ ಚುನಾವಣ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡುವರು.

ಸಮಾವೇಶದಲ್ಲಿ ಒಂದು ಲಕ್ಷ ಜನ ಸೇರುವರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಿಳಿಸಿದ್ದಾರೆ. ಸಮಾವೇಶದ ಸಿದ್ಧತೆಗಳ ಕುರಿತು ಪರಿಶೀಲಿಸಿ, “ರಾಹುಲ್‌ ಗಾಂಧಿ ಅವರ ಮಾತನ್ನು ಎಲ್ಲಿ ಅಡಗಿಸಲು ಪ್ರಯತ್ನ ಮಾಡಿದರೋ ಅಲ್ಲಿಂದಲೇ ಹೋರಾಟ ಆರಂಭಿಸುತ್ತಿದ್ದೇವೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next