Advertisement

Karnataka Nataka Academy; ಲಕ್ಷ್ಮಣ ಸುವರ್ಣ ಅವರಿಗೆ ದತ್ತಿನಿಧಿ ಪುರಸ್ಕಾರ

12:46 AM Aug 09, 2024 | Team Udayavani |

ಉಡುಪಿ: ನಾಟಕ ಅಕಾಡೆಮಿ ದತ್ತಿನಿಧಿ ಪುರಸ್ಕಾರಕ್ಕೆ ಉಡುಪಿ ಮೂಲದ ಲಕ್ಷ್ಮಣ ಸುವರ್ಣ ಆಯ್ಕೆಯಾಗಿದ್ದಾರೆ.

Advertisement

ಇವರು ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಕೇಂದ್ರ ಆಹಾರ ನಿಗಮದಲ್ಲಿ ಸೇವೆಯಲ್ಲಿದ್ದರು. ಈ ವೇಳೆ ರಂಗಭೂಮಿ ಕ್ಷೇತ್ರದ ಗಾಯನ ಮತ್ತು ಸಂಗೀತ ಸಂಯೋಜನೆ ಆಸಕ್ತಿಯನ್ನು ಬೆಳೆಸಿಕೊಂಡರು.

ಶಿವರುದ್ರಯ್ಯ ಕೆ. ಅವರ ನಿರ್ದೇಶನದ ಪ್ರಸಿದ್ಧ ನಾಟಕಗಳಾದ ಬೆಳ್ಳಕ್ಕಿ ಹಿಂಡು ಬೆದರ್ಯಾವ, ಸಾಕ್ಷಿ ಕಲ್ಲು, ದೊಡ್ಡಪ್ಪ, ಆರ್‌. ನಾಗೇಶ್‌ ನಿರ್ದೇಶನದ ಸುಲ್ತಾನ ಟಿಪ್ಪು, ಹಯವದನ ಸುಪ್ರಸಿದ್ಧ ನಾಟಕಗಳಿಗೆ ಗಾಯನ ಮತ್ತು ಸಂಗೀತ ಸಂಯೋಜಿಸಿದ್ದರು.

ಸತತ ನೂರು ಗಂಟೆಕಾಲ ರಾಗ ಮತ್ತು ಸಂಯೋಜನೆಗೆ ಲಿಮ್ಕಾ ದಾಖಲೆಯನ್ನು ಮಾಡಿದ್ದರು. ದೇವರ ಹೆಣ, ಒಂದು ಹಳ್ಳಿಯ ಕಥೆಯ ಖ್ಯಾತ ನಾಟಕವನ್ನು ನಿರ್ದೇಶಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next