Advertisement

ಕರ್ನಾಟಕ ಕೊಟ್ಟದ್ದು 16 ಟಿಎಂಸಿ ನೀರು

03:45 AM Jul 06, 2017 | Team Udayavani |

ಹೊಸದಿಲ್ಲಿ/ಚೆನ್ನೈ: ತನ್ನ ಪಾಲಿಗೆ ಬರಬೇಕಾದ ಕಾವೇರಿ ನೀರನ್ನು ಕರ್ನಾಟಕ ಬಿಡುತ್ತಿಲ್ಲ ಎಂದು ಮತ್ತೆ ಕ್ಯಾತೆ ತೆಗೆದಿರುವ ತಮಿಳುನಾಡು ಸರಕಾರ ಬುಧವಾರ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದೆ.

Advertisement

ಕೋರ್ಟ್‌ ಆದೇಶದ ಪ್ರಕಾರ 25 ದಿನಗಳಲ್ಲಿ ಕರ್ನಾಟಕ 22.5 ಟಿಎಂಸಿ ನೀರು ಹರಿಸ ಬೇಕಿದೆಯಾದರೂ ಈವರೆಗೆ ಹರಿಸಿರುವುದು 16.58 ಟಿಎಂಸಿ ನೀರು ಮಾತ್ರ ಎಂದು ತಮಿಳುನಾಡು ತನ್ನ ಅರ್ಜಿಯಲ್ಲಿ ಆರೋಪಿಸಿದೆ. ನ್ಯಾ| ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯ ಪೀಠದ ಮುಂದೆ ಸಲ್ಲಿಕೆಯಾದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲಾಗಿದೆ. ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ತಮಿಳುನಾಡು ಅರ್ಜಿಯ ಕುರಿತ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜು. 11ರಿಂದ ಆರಂಭಿಸಲಿದ್ದು, ಮುಂದಿನ 15 ಕೆಲಸದ ದಿನಗಳಲ್ಲಿ ನಡೆಸಲಿದೆ.

ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್‌ ಕರ್ನಾಟಕ ಸರಕಾರಕ್ಕೆ ಪ್ರತಿ ದಿನ ತಮಿಳುನಾಡಿಗೆ 2 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು. ಅದಕ್ಕಿಂತಲೂ ಮುಂಚೆ ಅಂದರೆ 2016ರ ಸೆ. 30ರಂದು ಕೋರ್ಟ್‌ ಕರ್ನಾಟಕವನ್ನು ತರಾಟೆಗೆ ತೆಗೆದುಕೊಂಡಿತ್ತು.

ಮೇಕೆದಾಟುಗೆ ತಗಾದೆ: ಕಾವೇರಿ ನದಿ ನೀರು ಹಂಚಿಕೆ ವಿಚಾರ ಇತ್ಯರ್ಥವಾಗುವವರೆಗೆ ಕರ್ನಾಟಕದ ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದು ಎಂದು ಕೇಂದ್ರವನ್ನು ಪಳನಿಸ್ವಾಮಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next