Advertisement

25ಕ್ಕೆ ಕರ್ನಾಟಕ, ಫೆ.4ಕ್ಕೆಬೆಂಗಳೂರು ಬಂದ್‌

10:07 AM Jan 22, 2018 | Team Udayavani |

ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಜ.25ರಂದು ಕರ್ನಾಟಕ ಬಂದ್‌ ಮಾಡಲಾಗುವುದು. ಅಲ್ಲದೆ, ಪ್ರಧಾನಿ ಫೆ.4ರಂದು ಬೆಂಗಳೂರಿಗೆ ಭೇಟಿ ನೀಡಿದಾಗ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ, ಬೆಂಗಳೂರು ಬಂದ್‌ಗೆ ಕರೆ ನೀಡಲಾಗುವುದು ಎಂದ ಕನ್ನಡ ಒಕ್ಕೂಟದ ರಾಜ್ಯಾಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿಕೆಗೆ ಗೊಂದಲಕ್ಕೆ ಕಾರಣವಾಯಿತು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಂದ್‌ಗೆ ಕರೆ ನೀಡಬೇಕಿತ್ತು ಎಂದು ಮಹದಾಯಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ವಾಟಾಳ್‌ ನಾಗರಾಜ್‌ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಹೋರಾಟಗಾರರು, ಪ್ರಧಾನಿ ಮೋದಿ ಬೆಂಗಳೂರಿಗೆ ಫೆ.4ರಂದು ಆಗಮಿಸುತ್ತಿದ್ದಾರೆ. ಅಂದು ಬೆಂಗಳೂರು ಬಂದ್‌ ಮಾಡಿ ಹನಿ ನೀರು ಸಿಗದಂತೆ ಮಾಡೋಣ ಎಂದರು. ಈ ವೇಳೆ, ಕೆಲಹೊತ್ತು ಗೊಂದಲದ ವಾತಾವರಣ ಮೂಡಿತು. ಮಹದಾಯಿ ಹೋರಾಟಗಾರರು ವಿರೋಧ ವ್ಯಕ್ತಪಡಿಸಿ ಸುದ್ದಿಗೋಷ್ಠಿಯಿಂದ ಹೊರನಡೆದರು. ಬಳಿಕ, ವಾಟಾಳ್‌ ಅವರು ಮಹದಾಯಿ ಹೋರಾಟಗಾರರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next