Advertisement

ರೈತರಿಗೆ ಸಹಕಾರಿ ಸಾಲದ ಕಂತು ತುಂಬಲು ಜೂನ್‌ 30ರ ವರೆಗೆ ಅವಕಾಶ

10:11 PM May 21, 2021 | Team Udayavani |

ಬೆಂಗಳೂರು: ಸಹಕಾರ ಸಂಸ್ಥೆಗಳ ಮೂಲಕ ಹಾಗೂ ಸ್ವ ಸಹಾಯ ಗುಂಪುಗಳ ಮೂಲಕ ರಿಯಾಯ್ತಿ ದರದಲ್ಲಿ ಸಾಲ ಪಡೆದು ಏಪ್ರಿಲ್‌ 1 ರಿಂದ ಜೂನ್‌ 30 ರ ವರೆಗೆ ಸಾಲ ಮರು ಪಾವತಿಸಲು ಗಡುವು ಪಡೆದ ರೈತರಿಗೆ ಜೂನ್‌ 30 ರ ವರೆಗೆ ಸಾಲ ಮರುಪಾವತಿ ಹಾಗೂ ಕಂತು ತುಂಬಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ.

Advertisement

ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಸಾಲ ಮರುಪಾವತಿ ಸಮಯವನ್ನು ಮೂರು ತಿಂಗಳು ವಿಸ್ತರಿಸುವಂತೆ ಅಪೆಕ್ಸ್‌ ಬ್ಯಾಂಕ್‌ ರಾಜ್ಯ ಸರ್ಕಾರಕ್ಕ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸಹಕಾರ ಸಂಸ್ಥೆಗಳ ಮೂಳಕ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಹಾಗೂ ಶೇ 3 ರ ಬಡ್ಡಿ ದರದಲ್ಲಿ 10 ಲಕ್ಷಗಳ ವರೆಗೆ ಅಲ್ಪಾವಧಿ ಹಾಗೂ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ಪಡೆದವರು ಜೂನ್‌ 30 ರ ವರೆಗೂ ಸಾಲ ಮರುಪಾವತಿ ಹಾಗೂ ಕಂತು ತುಂಬಲು ಅವಕಾಶ ಕಲ್ಪಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ :ಕಲಬುರಗಿ ಜಿಲ್ಲೆಯಲ್ಲಿ 30 ಜನ ಬ್ಯ್ಲಾಕ್ ಫಂಗಸ್ ಶಂಕಿತರು : ಓರ್ವ ವೃದ್ಧೆ ಸಾವು

Advertisement

Udayavani is now on Telegram. Click here to join our channel and stay updated with the latest news.

Next