Advertisement

ಕಾರ್ಕಳ: ಮುನಿಯಾಲು- ಮುತಾಲಿಕ್ ಹೋರಾಟದ ನಡುವೆ ಮತ್ತೆ ಕಮಲ ಅರಳಿಸಿದ ಸುನಿಲ್ ಕುಮಾರ್

01:17 PM May 13, 2023 | Team Udayavani |

ಉಡುಪಿ: ಕಾಂಗ್ರೆಸ್ ಅಭ್ಯರ್ಥಿಯ ತೀವ್ರ ಹೋರಾಟ ಮತ್ತೊಂದೆಡೆ ಗುರು ಪ್ರಮೋದ್ ಮುತಾಲಿಕ್ ಸ್ಪರ್ಧೆಯ ಹೊರತಾಗಿಯೂ ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಪವರ್ ಮಿನಿಸ್ಟರ್ ವಿ ಸುನೀಲ್ ಕುಮಾರ್ ಅವರು ತಮ್ಮ ಕ್ಷೇತ್ರ ಉಳಿಸಿಕೊಂಡಿದ್ದಾರೆ.

Advertisement

ಚುನಾವಣೆ ಘೋಷಣೆಗೂ ಮೊದಲೇ ಪ್ರಮೋದ್ ಮುತಾಲಿಕ್ ಅವರ ಸ್ಪರ್ಧೆಯ ಕಾರಣದಿಂದ ರಾಜ್ಯದ ಕುತೂಹಲಕ್ಕೆ ಕಾರಣವಾಗಿದ್ದ ಕಾರ್ಕಳ ಕ್ಷೇತ್ರದಲ್ಲಿ ಕೊನೆಗೂ ಸುನೀಲ್ ಕುಮಾರ್ ಗೆಲುವಿನ ನಗೆ ಬೀರಿದ್ದಾರೆ.

ಮೊದಲ ಬಾರಿ ಟಿಕೆಟ್ ಪಡೆದಿದ್ದ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಅವರು ಸಚಿವ ಸುನಿಲ್ ಗೆ ಭರ್ಜರಿ ಫೈಟ್ ನೀಡಿದ್ದರು. ಆದರೆ ಪ್ರಮೋದ್ ಮುತಾಲಿಕ್ ಅವರಿಂದ ನಿರೀಕ್ಷಿತ ಫೈಟ್ ಬರಲಿಲ್ಲ.

ಇದನ್ನೂ ಓದಿ:ಉಡುಪಿ : ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಗೆಲುವು

ಉಂಟಾದ ಗೊಂದಲ: ಸುಮಾರು 12 ಸುತ್ತಿನ ಮತ ಎಣಿಕೆ ಮುಗಿದ ಬಳಿಕ ಕ್ಷೇತ್ರದ ಫಲಿತಾಂಶದ ಬಗ್ಗೆ ಗೊಂದಲ ಉಂಟಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ 850 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆಂಬ ವಾಟ್ಸಾಪ್ ಸಂದೇಶ ಹರದಿದಾಡಿತ್ತು. ಹಲವೆಡೆ ಕಾಂಗ್ರೆಸ್ ಅಭಿಮಾನಿಗಳು ಸಂಭ್ರಾಮಾಚರಣೆಯಲ್ಲಿ ಕೂಡಾ ತೊಡಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next