Advertisement

ರಾಜ್ಯದಲ್ಲಿ ಒಂದು ಲಕ್ಷಕ್ಕೇರಿದ ಸಕ್ರಿಯ ಪ್ರಕರಣಗಳು

11:25 PM Sep 26, 2020 | sudhir |

ಬೆಂಗಳೂರು: ರಾಜ್ಯದಲ್ಲಿ ಶನಿವಾರ 8,503 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, 86 ಮಂದಿ ಸಾವಿಗೀಡಾಗಿದ್ದಾರೆ. ಜತೆಗೆ 5, 417 ಮಂದಿ ಗುಣಮುಖರಾಗಿದ್ದಾರೆ.

Advertisement

ಸದ್ಯ ಒಟ್ಟಾರೆ ಸೋಂಕು ಪ್ರಕರಣ ಗಳ ಸಂಖ್ಯೆ 5.66 ಲಕ್ಷಕ್ಕೆ ಹೆಚ್ಚಳ ವಾಗಿದ್ದು, 4.55 ಲಕ್ಷ ಪ್ರಕರಣ ಗಳಲ್ಲಿ ಸೋಂಕಿತರು ಗುಣಮುಖ ರಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 8,503ಕ್ಕೆ ಹೆಚ್ಚಳವಾಗಿದೆ. ಸುಮಾರು 1,01,782 ಮಂದಿ ಚಿಕಿತ್ಸೆಯಲ್ಲಿದ್ದು, ಈ ಪೈಕಿ 832 ಮಂದಿ ಐಸಿಯುನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪ್ರಸ್ತುತ ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ಕರ್ನಾಟಕದಲ್ಲಿವೆ.

ಎಎಸ್‌ಐ ಸಾವು
ಶಿವಮೊಗ್ಗ: ಕೋವಿಡ್ ಸೋಂಕು ತಗಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಇಎನ್‌ ಪೊಲೀಸ್‌ ಠಾಣೆಯ ಎಎಸ್‌ಐ ಮಂಜುನಾಥ್‌ (58) ಅವರು ಶನಿವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next