Advertisement
ಸದ್ಯ ಒಟ್ಟಾರೆ ಸೋಂಕು ಪ್ರಕರಣ ಗಳ ಸಂಖ್ಯೆ 5.66 ಲಕ್ಷಕ್ಕೆ ಹೆಚ್ಚಳ ವಾಗಿದ್ದು, 4.55 ಲಕ್ಷ ಪ್ರಕರಣ ಗಳಲ್ಲಿ ಸೋಂಕಿತರು ಗುಣಮುಖ ರಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 8,503ಕ್ಕೆ ಹೆಚ್ಚಳವಾಗಿದೆ. ಸುಮಾರು 1,01,782 ಮಂದಿ ಚಿಕಿತ್ಸೆಯಲ್ಲಿದ್ದು, ಈ ಪೈಕಿ 832 ಮಂದಿ ಐಸಿಯುನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪ್ರಸ್ತುತ ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ಕರ್ನಾಟಕದಲ್ಲಿವೆ.
ಶಿವಮೊಗ್ಗ: ಕೋವಿಡ್ ಸೋಂಕು ತಗಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಇಎನ್ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್ (58) ಅವರು ಶನಿವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.