Advertisement

ತೆರಿಗೆ ಹೊರೆ ಇಲ್ಲದೆ ಸಂಪನ್ಮೂಲ ಕ್ರೋಢೀಕರಣದ ಜಾಣ್ಮೆ

08:28 PM Feb 17, 2023 | Team Udayavani |

ಬೆಂಗಳೂರು: ಚುನಾವಣೆ ವರ್ಷದ ಬಜೆಟ್‌ನಲ್ಲಿ ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹಾಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಪನ್ಮೂಲ ಕ್ರೋಢೀಕರಣದಲ್ಲಿ ಜಾಣ್ಮೆ ತೋರಿದ್ದಾರೆ.

Advertisement

ವೃತ್ತಿ ತೆರಿಗೆ ವಿನಾಯಿತಿ 15 ಸಾವಿರ ರೂ.ನಿಂದ 25 ಸಾವಿರ ರೂ.ಗೆ ನಿಗದಿ ಮಾಡುವ ಮೂಲಕ ಕಡಿಮೆ ವರಮಾನದ ವರ್ಗಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.

2023-24 ನೇ ಸಾಲಿನಲ್ಲಿ ರಾಜ್ಯದ ಬಜೆಟ್‌ ಗಾತ್ರ 3,03,910 ಕೋಟಿ ರೂ. ತಲುಪಿದ್ದು 2022-23 ಸಾಲಿಗೆ ಹೋಲಿಸಿದರೆ 15 ಸಾವಿರ ಕೋಟಿ ರೂ. ಹೆಚ್ಚಳವಾಗಿದೆ.

2023-24 ನೇ ಸಾಲಿಗೆ ಜಿಎಸ್‌ಟಿ ಪರಿಹಾರ ಹೊರತುಪಡಿಸಿ 92 ಸಾವಿರ ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹ ಗುರಿ ನಿಗದಿ ಮಾಡಿದ್ದು, ಅಬಕಾರಿ ವಲಯದಿಂದ 35 ಸಾವಿರ ಕೋಟಿ ರೂ.ನಿರೀಕ್ಷಿಸಲಾಗಿದೆ.

ನೋಂದಣಿ ಮತ್ತು ಮುದ್ರಾಂಕ ಬಾಬಿ¤ನಿಂದ 19 ಸಾವಿರ ಕೋಟಿ ರೂ., ಸಾರಿಗೆ ಇಲಾಖೆಯಿಂದ 10,500 ಕೋಟಿ ರೂ., ಗಣಿ ಮತ್ತು ಭೂ ವಿಜ್ಞಾನ ಮೂಲಕ ಖನಿಜ ಬ್ಲಾಕ್‌ಗಳ ಹರಾಜಿನಿಂದ 7,500 ಕೋಟಿ ರೂ. ಸೇರಿ ಒಟ್ಟು 1.64 ಲಕ್ಷ ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ಹೊಂದಿದ್ದಾರೆ.

Advertisement

ಅಬಕಾರಿ ವಲಯದಿಂದ 2022-23 ನೇ ಸಾಲಿನಲ್ಲಿ 29 ಸಾವಿರ ಕೋಟಿ ರೂ. ನಿರೀಕ್ಷಿಸಿ 32 ಸಾವಿರ ಕೋಟಿ ರೂ. ಸಂಗ್ರಹವಾಗಿದ್ದು, ಈ ವರ್ಷ 35 ಸಾವಿರ ಕೋಟಿ ರೂ. ಟಾರ್ಗೆಟ್‌ ನೀಡಲಾಗಿದೆ.

ನೋಂದಣಿ ಮತ್ತು ಮುದ್ರಾಂಕ ಬಾಬಿನಿಂದ 15 ಸಾವಿರ ಕೋಟಿ ರೂ. ಗುರಿ ಪೈಕಿ 17 ಸಾವಿರ ಕೋಟಿ ರೂ. ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಈ ವರ್ಷ 19 ಸಾವಿರ ಕೋಟಿ ರೂ. ಗುರಿ ನಿಗದಿಪಡಿಸಲಾಗಿದೆ. ಅದೇ ರೀತಿ ಸಾರಿಗೆ ಇಲಾಖೆಯಿಂದ 2022-23 ನೇ ಸಾಲಿನ ಗುರಿ 8,007 ಕೋಟಿ ರೂ.ಗಳಿಗಿಂತ 1 ಸಾವಿರ ಕೋಟಿ ರೂ. ಹೆಚ್ಚು ಸಂಗ್ರಹ ಮೂಲಕ ಗುರಿಗಿಂತ ಶೇ.13 ರಷ್ಟು ಹೆಚ್ಚು ಸಾಧಿಸಿದ್ದರಿಂದ ಈ ವರ್ಷ 10,500 ಕೋಟಿ ರೂ.ನಿಗದಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next