Advertisement

Karnataka BJP ; 8 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ..!; ಎಸ್.ಟಿ.ಸೋಮಶೇಖರ್ ಬಾಂಬ್

07:13 PM Oct 24, 2024 | Team Udayavani |

ಬೆಂಗಳೂರು: 8 ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಗುರುವಾರ(ಅ24) ಹೊಸ ಬಾಂಬ್ ಸಿಡಿಸಿದ್ದಾರೆ.

Advertisement

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಸೋಮಶೇಖರ್ ”ಯೋಗೇಶ್ವರ್ ಅವರನ್ನು ಬಿಜೆಪಿಯು ಬೇಕಾದ ಹಾಗೆ ಬಳಕೆ ಮಾಡಿಕೊಂಡಿತು. ಈಗ ಅವರನ್ನು ತೆಗಳುತ್ತಿದೆ. ಅಂದು ಬಿಜೆಪಿ ಸರಕಾರ ರಚನೆಯಾಗಲು ಕೆಲಸ ಮಾಡಿದವರು ಯೋಗೇಶ್ವರ್” ಎಂದರು.

ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧ ಕಿಡಿ ಕಾರಿ ” ಅವರ ಹೇಳಿಕೆಗಳಿಗೆಲ್ಲ ಬೆಲೆ ಕೊಡಬೇಕಾಗಿಲ್ಲ ಎಂದರು. ಇದೆ ವೇಳೆ ”ಕಾಂಗ್ರೆಸ್ ಸೇರ್ಪಡೆಯಾಗುವ 8 ಮಂದಿ ಬಿಜೆಪಿ ಶಾಸಕರಲ್ಲಿ ಇಬ್ಬರು ಬೆಂಗಳೂರಿನವರು” ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ಮೊದಲು ಪಕ್ಷದ ವಿರುದ್ಧ ಬಂಡೆದ್ದು ಇನ್ನೂ ಬಿಜೆಪಿಯಲ್ಲೇ ಇರುವ ಸೋಮಶೇಖರ್ ಮತ್ತು ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಪಕ್ಷದಿಂದ ಈಗಲೂ  ಅಂತರ ಕಾಯ್ದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next