Advertisement

ಕಾವೇರಿ ನಾಲೆಗಳಿಗೆ 4 ಜಲಾಶಯದಿಂದ ನೀರು ಬಿಡುಗಡೆ: ಸಿಎಂ

01:27 PM Aug 09, 2017 | Team Udayavani |

ಬೆಂಗಳೂರು: ಕಾವೇರಿ ನದಿಯ ನಾಲೆಗಳಿಗೆ ನೀರು ಹರಿಸುವಂತೆ ಕಳೆದ 34 ದಿನಗಳಿಂದ ರೈತರು ನಡೆಸಿದ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ , ಗುರುವಾರದಿಂದ ಕಾವೇರಿ ನದಿ ನಾಲೆಗಳಿಗೆ ಹೇಮಾವತಿ, ಕಬಿನಿ, ಕೆಆರ್ ಎಸ್, ಹಾರಂಗಿ ಜಲಾಶಯದಿಂದ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬುಧವಾರ ನಡೆದ ಮಹತ್ವದ ಸಭೆಯಲ್ಲಿ ಕಾವೇರಿ ನಾಲೆಗಳಿಗೆ ನಾಳೆಯಿಂದ ನೀರು ಬಿಡುವ ನಿರ್ಧಾರ ಕೈಗೊಳ್ಳಲಾಯಿತು. ಮಳೆ ಆಧಾರಿತ ಬೆಳೆಗಳನ್ನು ಮಾತ್ರ ಬೆಳೆಯಿರಿ. ಭತ್ತ, ಕಬ್ಬು ಬೆಳೆಯಬೇಡಿ, ಇದಕ್ಕೆ ನೀರು ಕೊಡಲು ಆಗಲ್ಲ ಎಂದು ಹೇಳಿದರು.

ಕುಡಿಯಲು, ಜಾನುವಾರುಗಳಿಗಾಗಿ ನಾಳೆಯಿಂದ 4 ಜಲಾಶಯದ ಮೂಲಕ ನೀರು ಬಿಡುಗಡೆ ಮಾಡಲಾಗುತ್ತದೆ, ಆದರೆ ನೀರು ಬಿಟ್ಟಿದ್ದೇವೆ ಎಂದು ರೈತರು ಭತ್ತ ಬೆಳೆಯಬಾರದು ಎಂದು ಸಿಎಂ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next