Advertisement

ಕಾರ್ಕಳ: ಟ್ರಾವೆಲರ್‌ ಢಿಕ್ಕಿ: ಪಾದಚಾರಿ ಸಾವು

01:46 AM Feb 11, 2023 | Team Udayavani |

ಕಾರ್ಕಳ: ಟೆಂಪೋ ಟ್ರಾವೆಲರ್‌ ಢಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ಹಿರ್ಗಾನ ಗ್ರಾಮದ ಕುಕ್ಕುದಕಟ್ಟೆಯಲ್ಲಿ ಫೆ. 9ರಂದು ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿ ಕುಟ್ಟಿ ಶೆಟ್ಟಿ (50) ಮೃತಪಟ್ಟಿದ್ದಾರೆ.

Advertisement

ಹೆಬ್ರಿ ಕಡೆಯಿಂದ ಕಾರ್ಕಳ ಕಡೆಗೆ ಟೆಂಪೋ ಟ್ರಾವೆಲರ್‌ ವಾಹನವನ್ನು ಅದರ ಚಾಲಕ ಗೋಪಾಲ ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಎಡಬದಿಯ ಮಣ್ಣು ರಸ್ತೆಗೆ ಚಲಾಯಿಸಿಕೊಂಡು ಬಂದಿದ್ದು, ಅಲ್ಲಿ ಹೆಬ್ರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಕುಟ್ಟಿ ಶೆಟ್ಟಿ ಅವರಿಗೆ ಢಿಕ್ಕಿ ಹೊಡೆಯಿತು. ಮಣ್ಣಿನ ರಸ್ತೆಗೆ ಮಗುಚಿ ಬಿದ್ದು ಮುಖ ಹಾಗೂ ಹಣೆಗೆ ತೀವ್ರ ಸ್ವರೂಪದ ಗಾಯವಾಯಿತು. ಕೂಡಲೇ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಬದುಕಲಿಲ್ಲ.

ಖಾಸಗಿ ಬಸ್‌ಗಳ ಮಧ್ಯೆ ಅಪಘಾತ
ಸುಬ್ರಹ್ಮಣ್ಯ: ಖಾಸಗಿ ಬಸ್‌ಗೆ ಇನ್ನೊಂದು ಖಾಸಗಿ ಬಸ್‌ ಹಿಂಬದಿಯಿಂದ ಢಿಕ್ಕಿಯಾದ ಘಟನೆ ಸುಬ್ರಹ್ಮಣ್ಯ -ಮರ್ದಾಳ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಪೇರಡ್ಕ ಬಳಿ ಸಂಭವಿಸಿದೆ. ಎರಡೂ ಬಸ್‌ಗಳು ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದವು. ಮುಂದಿನ ಬಸ್‌ ಒಮ್ಮೆಲೇ ಬ್ರೇಕ್‌ ಹಾಕಿದ ವೇಳೆ ಹಿಂಬದಿಯಲ್ಲಿದ್ದ ಬಸ್‌ ಢಿಕ್ಕಿಯಾಗಿದೆ. ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಎರಡೂ ಬಸ್‌ನಲ್ಲಿ ಜೆಡಿಎಸ್‌ ಪಕ್ಷದ ನಾಯಕರ ಭಾವಚಿತ್ರದೊಂದಿಗೆ ಧರ್ಮಸ್ಥಳ ಧರ್ಮಯಾತ್ರೆ ಎಂಬ ಬರವಣಿಗೆ ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next