Advertisement

ಕಾರ್ಕಳ: ಗಂಟಲ ದ್ರವ ಸಂಗ್ರಹ

10:49 AM May 23, 2020 | mahesh |

ಕಾರ್ಕಳ: ಹೊರ ರಾಜ್ಯದಿಂದ ಕಾರ್ಕಳಕ್ಕೆ ಸುಮಾರು 2,500 ಮಂದಿ ಆಗಮಿಸಿದ್ದು, ಅವರೆಲ್ಲರೂ ಕಾರ್ಕಳ ಮತ್ತು ಹೆಬ್ರಿಯ 32 ಕ್ವಾರಂಟೈನ್‌ ಕೇಂದ್ರಗಳಲ್ಲಿದ್ದಾರೆ. ಶುಕ್ರವಾರ ಕಾರ್ಕಳದ ಕ್ವಾರಂಟೈನ್‌ನಲ್ಲಿ ಇರುವವರ ಗಂಟಲು ದ್ರವ ಸಂಗ್ರಹಿಸಲಾಗಿದೆ.

Advertisement

ದಾನಶಾಲೆ ಪ್ರವಚನ ಮಂದಿರದಲ್ಲಿ ಇರುವ 35 ಮಂದಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಪೊಲೀಸರ ನಿಯೋಜನೆಯಿಲ್ಲದೆ ಶಿಕ್ಷಕರು ಮತ್ತು ವಿವಿಧ ಇಲಾಖಾ ಸಿಬಂದಿ ಕ್ವಾರಂಟೈನ್‌ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕ್ವಾರಂಟೈನ್‌ನಲ್ಲಿರುವವರು ಯಾರ ಭಯವೂ ಇಲ್ಲದೆ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಕೆಲವು ಕ್ವಾರಂಟೈನ್‌ ಕೇಂದ್ರಗಳಿಗೆ ಮನೆಯಿಂದ ಊಟ ತರಲಾಗುತ್ತಿದೆ. ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವವರನ್ನು ಮನೆಮಂದಿ ಬಂದು ಮಾತನಾಡಿಸಿ ಹೋಗುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಕ್ವಾರಂಟೈನ್‌ನಲ್ಲಿ ಪೊಲೀಸರು
ಮುಂಬಯಿಯಿಂದ ಉಡುಪಿಗೆ ಆಗಮಿಸುವವರ ದಾಖಲೆ ಪರಿಶೀಲನೆ ಹಿನ್ನೆಲೆಯಲ್ಲಿ ನಿಪ್ಪಾಣಿಗೆ ತೆರಳಿ ಕಾರ್ಯನಿರ್ವಹಿಸಿರುವ ಕಾರ್ಕಳ ನಗರ ಠಾಣಾ ಎಸ್‌ಐ ಮಧು ಬಿ.ಇ. ಸೇರಿದಂತೆ 13 ಮಂದಿ ಸಿಬಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next