Advertisement

ಅಮ್ಮನ ಪಾಲಿಗೆ ಮಗನೇ ಖಳನಾಯಕ: ವ್ರದ್ಧೆ ತಾಯಿಯನ್ನು ಅಮಾನುಷವಾಗಿ ನಡೆಸಿಕೊಂಡ ಪುತ್ರ

10:35 AM Jun 05, 2021 | Team Udayavani |

ಕಾರ್ಕಳ; ತಾಯಿ ಮಮತಾಮಯಿ ಪ್ರೀತಿ ವಾತ್ಸಲ್ಯವನೀವ ಪ್ರೇಮಮಯಿ. ಕರುಳ ಮಿಡಿತವನ್ನರಿವ ಕಾರುಣ್ಯಮಯಿ ಹೇಳದೆ ಎಲ್ಲವನರಿತು ಸಲಹುವ ಅಮೃತಾಮಯಿ.ಸಕಲತಪ್ಪುಗಳನ್ನು ಮನ್ನಿಸಿ ಕ್ಷಮಿಸುವ ದಯಾಮಯಿ ಅಂತಹ ಕರುಣಾಮಯಿ ತಾಯಿಗೆ  ಮಗ ಹಲ್ಲೆ ನಡೆಸಿ ಕ್ರೂರತ್ವ  ಮೆರೆದ ಕರುಣಾಜನಕ ಘಟನೆಯೊಂದು ಕಾರ್ಕಳ ತಾಲೂಕಿಕ ಕುಂಟಾಡಿನಲ್ಲಿ ನಡೆದಿದೆ.

Advertisement

ಜನ್ಮ ಕೊಟ್ಟ ವ್ರದ್ದೆತಾಯಿಯನ್ನು ಮಗ ಯಾವ ರೀತಿ ನಡೆಸಿಕೊಂಡಿದ್ಸಾನೆ ಎನ್ನುವುದಕ್ಕೆ ಇದೊಂದು ಘಟನೆ ಸಾಕ್ಷಿ ಸಾಕು. ಕಾರ್ಕಳ ತಾಲೂಕಿನ ಕುಂಟಾಡಿ ಗ್ರಾಮಕ್ಕೆ ಶುಕ್ರವಾರ ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೆಂದ್ರ ಯುವಕರ ಜತೆ ಬಡ ಕುಟುಂಬಗಳಿಗೆ ದಿನಸಿ ವಿತರಿಸಲೆಂದು ತೆರಳಿದ್ದಾರೆ. ಈ ವೇಳೆ ಮನೆಯೊಂದರ ಜಗುಳಿಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ವ್ರದ್ದೆಯೊಬ್ಬರು ರಕ್ತದ ಗಾಯಗಳೊಂದಿಗೆ ಇರುವುದು ಅವರ ಗಮನಕ್ಕೆ ಬಂದಿದೆ. ಕೂಡಲೆ ರಮಿತಾರವರು ಆ ಶರೀರ ಪೂರ್ತಿ ಗಾಯಗಳಾಗಿದ್ದ ವ್ರದ್ದೆಯನ್ನು  ವ್ರದ್ದೆಯ ಮಗನ ಸಹಾಯದಿಂದಲೇ ಅಂಬುಲೆನ್ಸ್ ಮೂಲಕ  ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಕಪ್ಪು ಶಿಲೀಂಧ್ರ ಸೋಂಕಿಗೆ ಉಡುಪಿಯಲ್ಲಿ ಮತ್ತೊಂದು ಬಲಿ

82 ರ ಇಳಿ ವಯಸ್ಸಿನ ಅಜ್ಜಿಗೆ ಏಕೈಕ ಮಗನಿದ್ದು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ತಿಳಿದು  ಆಸ್ಪತ್ರೆಗೆ ತೆರಳಿ ಗಾಯಾಳು ವ್ರದ್ದೆಯ ಹೇಳಿಕೆ ಪಡೆದುಕೊಂಡಿದ್ದಾರೆ. ಈ ವೇಳೆ ಅಜ್ಜಿ ಪೊಲೀಸರ ಮುಂದೆ ಮಗ ಊಟ ಕೇಳಿದಕ್ಕೆ ತನ್ನ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾಗಿ ಹೇಳಿಕೆ ನೀಡಿದ ಮೇರೆಗೆ ಮಗ ದಾಮೋದರ ವಿರುದ್ಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಯಿಯೊಂದಿಗೆ ಮಗ ಅಮಾನುಷವಾಗಿ ನಡೆದುಕೊಂಡಿದ್ದರ ಬಗ್ಗೆ ಸಾರ್ವಜನಿಕ ವಲಯಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಇವನ್ನು ಒಬ್ನ ಮನುಷ್ಯನೇ ಎಂದು ದೂರುತ್ತಿದ್ದಾರೆ..ಮಗನ ಬಳಿ ವಿಚಾರಿಸಿದಾಗ ತಾಯಿಗೆ ಬಿದ್ದು ಗಾಯವಾಗಿದೆ ಎಂದಿದ್ದು. ಆಸ್ಪತ್ರೆಗೆ ಸೇರಿಸದೆ ಇರುವುದರ ಕುರಿತು ಕೇಳಿದಾಗ ಆತನಲ್ಲಿ ಉತ್ತರವಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next