Advertisement

ಕಾರ್ಕಳ: ಎಂ. ಆರ್ ಎಂದೇ ಚಿರಪರಿಚಿತರಾಗಿದ್ದ ಸಾಹಿತಿ, ಪ್ರೊ. ಎಂ ರಾಮಚಂದ್ರ ವಿಧಿವಶ

10:00 AM Dec 21, 2019 | Mithun PG |

ಕಾರ್ಕಳ : ಕಾರ್ಕಳ ಸಾಹಿತ್ಯ ಸಂಘದ ಸಂಸ್ಥಾಪಕ, ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿರುವ ಪ್ರೊ. ಎಂ. ರಾಮಚಂದ್ರರವರು ವಿಧಿವಶರಾಗಿದ್ದಾರೆ.

Advertisement

ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರದ ಅಗ್ರಗಣ್ಯರನ್ನ, ತಜ್ಞರನ್ನು ಕಾರ್ಕಳಕ್ಕೆ ಕರೆಸಿ ವಿಚಾರಗೋಷ್ಠಿ ನಡೆಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕಾರ್ಕಳ ಸಾಹಿತ್ಯ ಸಂಘದ ಮೂಲಕ  ಕಲೆ,ಸಾಹಿತ್ಯ, ಸಂಸ್ಕೃತಿ , ಧರ್ಮದ ವಿಚಾರಕ್ಕೆ ಸಂಬಂಧಿಸಿದ ಐನೂರಕ್ಕಿಂತಲೂ ಹೆಚ್ವು ಕಾರ್ಯಕ್ರಮ ಆಯೋಜಿಸಿದ ಹಿರಿಮೆಗೆ ಪಾತ್ರರಾಗಿರುವ ಇವರು ಎಂ.ಆರ್. ಎಂದೇ ಖ್ಯಾತರಾಗಿದ್ದಾರೆ.

ಪ್ರೊ. ಎಂ. ರಾಮಚಂದ್ರರವರು ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ ಜೆ.ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಭಾಜನರಾಗಿದ್ದರು.

ಪ್ರೊ. ರಾಮಚಂದ್ರರವರು ಮೂಲತಃ ಸುಳ್ಯ ತಾಲೂಕಿನವರು. 1962ರಲ್ಲಿ ಧಾರವಾಡದ ಕರ್ನಾಟಕ ವಿವಿಯಲ್ಲಿ ಕನ್ನಡ ಎಂ.ಎ ಪದವಿ ಪಡೆದರು. ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ 35 ವರ್ಷಗಳ ಕಾಲ ಕನ್ನಡ ಉಪನ್ಯಾಸಕರಾಗಿ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸಿ  1997ರಲ್ಲಿ ನಿವೃತ್ತರಾಗಿದ್ದಾರೆ. ಇವರ ಅನೇಕ ಲೇಖನಗಳು ಉದಯವಾಣಿ ದಿನಪತ್ರಿಕೆ, ತರಂಗ, ತುಷಾರದಲ್ಲಿ ಪ್ರಕಟಗೊಂಡಿದೆ. 20 ರಷ್ಟೂ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next