Advertisement

ಕಳಸ-ಕಾರ್ಕಳ ಹೆದ್ದಾರಿ ತಿರುವು ಸಿಲುಕಿದ ಐರಾವತ!

10:03 AM Aug 25, 2018 | Team Udayavani |

ಕಾರ್ಕಳ: ಕಳಸ-ಕಾರ್ಕಳ ಹೆದ್ದಾರಿಯ ತಿರುವೊಂದರಲ್ಲಿ ಶುಕ್ರವಾರ ಕೆಎಸ್‌ಆರ್‌ಟಿಸಿ ಐರಾವತ ಬಸ್ಸನ್ನು ತಿರುಗಿಸಲು ಸಾಧ್ಯ ವಾಗದೆ ಸಾಕಷ್ಟು ಕಾಲ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ.

Advertisement

ಮಂಗಳೂರಿಗೆ ಬರುತ್ತಿದ್ದ ಬಸ್ಸನ್ನು ಹೆದ್ದಾರಿಯ ನೆಲ್ಲಿಬೀಡು ಎಂಬಲ್ಲಿ ತಿರುವಿನಲ್ಲಿ ಚಾಲಕನಿಗೆ ಸರಾಗವಾಗಿ ತಿರುಗಿಸಲು ಸಾಧ್ಯವಾಗಿಲ್ಲ. ಬಸ್‌ ಹಿಂದೆಯೂ ಹೋಗದೇ ಮುಂದೆಯೂ ಸಾಗದೇ ಸಮಸ್ಯೆ ಉಂಟಾಗಿತ್ತು. ಬಸ್‌ ಸಿಬಂದಿ, ಜನರು ಸೇರಿ ಪ್ರಯ ತ್ನಿಸಿ ದರೂ ಸಾಧ್ಯವಾಗಿಲ್ಲ. ಅನಂತರ ಜೆಸಿಬಿ ಸಹಾಯದಿಂದ ಬಸ್ಸನ್ನು ಹಿಂದಕ್ಕೆ ಎಳೆದು ತಿರುಗಿಸಲು ಅನುವು ಮಾಡಿ ಕೊಡಲಾಯಿತು. ಚಾರ್ಮಾಡಿ ರಸ್ತೆಯಲ್ಲಿ ಘನ ವಾಹನಗಳಿಗೆ ಪ್ರವೇಶವಿಲ್ಲದ ಕಾರಣ ಕೆಲವು ವಾಹನಗಳು ಕಳಸ-ಕಾರ್ಕಳ ರಸ್ತೆಯಲ್ಲಿ  ಸಂಚರಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next