Advertisement

ಕಾರ್ಕಡ: ತೆಂಕಹೋಳಿ ರಸ್ತೆ : ಕಾಂಕ್ರಿಟೀಕರಣಗೊಳಿಸಿ ಅಭಿವೃದ್ಧಿಪಡಿಸಲು ಆಗ್ರಹ

11:34 PM Oct 21, 2019 | Sriram |

ಕೋಟ: ಸಾಲಿಗ್ರಾಮ ಪ.ಪಂ.ವ್ಯಾಪ್ತಿಯ ಕಾರ್ಕಡ ತೆಂಕಹೋಳಿ ಕಾಳಿಂಗ ಹೊಳ್ಳರ ಮನೆ ಸಮೀಪದ ರಸ್ತೆ ಅಭಿವೃದ್ಧಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ಸ್ಥಳೀಯರಾದ ಕಾಳಿಂಗ‌ ಹೊಳ್ಳ ಎನ್ನುವ ಹಿರಿಯ ನಾಗರಿಕರು ಈ ರಸ್ತೆಯ ಅಬಿವೃದ್ಧಿ ಆಗ್ರಹಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಎರಡೆರಡು ಬಾರಿ ಪತ್ರ ಬರೆದಿದ್ದರು. ಇದರ ಪರಿಣಾಮ ಕಳೆದ ವರ್ಷ ಶಾಸಕರು, ವಿಧಾನಪರಿಷತ್‌ ಸದಸ್ಯರ ಅನುದಾನದಲ್ಲಿ ರಿವೀಟ್‌ಮೆಂಟ್‌ ನಿರ್ಮಿಸಿ ಸಮತಟ್ಟುಗೊಳಿಸುವ ಕಾಮಗಾರಿ ನಡೆದಿತ್ತು. ಆದರೆ ಇದೀಗ ಮಳೆಗಾಲದಲ್ಲಿ ಇಲ್ಲಿ ಸಂಚರಿಸಲು ಸಮಸ್ಯೆಯಾಗುತ್ತಿರುವುದರಿಂದ ರಸ್ತೆ ಕಾಂಕ್ರಿಟೀಕರಣಕ್ಕೆ ಮನವಿ ಮಾಡಲಾಗಿದೆ.

ಕುಸಿದ ಹಳೆಯ ರಿವೀಟ್‌ಮೆಂಟ್‌
ಸುಮಾರು ಆರೇಳು ವರ್ಷದ ಹಿಂದೆ ಈ ರಸ್ತೆಗೆ ಪ.ಪಂ. ಅನುದಾನದಲ್ಲಿ ರಿವೀಟ್‌ಮೆಂಟ್‌ ನಿರ್ಮಿಸಲಾಗಿತ್ತು. ಆದರೆ ಅಸಮರ್ಪಕ ಕಾಮಗಾರಿಯಿಂದಾಗಿ ಇದೀಗ ರಿವೀಟ್‌ಮೆಂಟ್‌ ಸಂಪೂರ್ಣ ಕುಸಿದಿದ್ದು ನೀರು ರಸ್ತೆ ಮೇಲೆ ಹರಿಯುತ್ತಿದೆ. ಹೀಗಾಗಿ ಇದನ್ನು ಕೂಡ ದುರಸ್ತಿಗೊಳಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next