Advertisement

ಕರಿಗೌಡನಹಳ್ಳಿ ಸೇತುವೆ ಪಿಲ್ಲರ್‌ ಕಾಮಗಾರಿ ಪೂರ್ಣ

03:08 PM Dec 15, 2020 | Suhan S |

ಆಲೂರು: ತಾಲೂಕಿನ ಕರಿಗೌಡನಹಳ್ಳಿ ಗ್ರಾಮದ ಬಳಿ ಹೇಮಾವತಿ ಹಿನ್ನೀರಿಗೆ ನಿರ್ಮಾಣವಾಗುತ್ತಿರುವಸೇತುವೆಯ ಪಿಲ್ಲರ್‌ ಕಾಮಗಾರಿ ಮುಕ್ತಾಯಗೊಂಡಿದ್ದು,ಮೂರ್ನಾಲ್ಕು ತಿಂಗಳಲ್ಲಿ ಸೇತುವೆ ಸಾರ್ವಜನಿಕರ ಸೇವೆಗೆ ಸಮರ್ಪಣೆಗೊಳ್ಳಲಿದೆ. ಸೇತುವೆ ನಿರ್ಮಾಣದ ಕನಸು ಹಲವು ವರ್ಷಗಳದ್ದಾಗಿದ್ದು, ಪಕ್ಕದ ಆಲೂರು ತಾಲೂಕು ಕೇಂದ್ರಕ್ಕೆ ಬರಲು 10 ರಿಂದ 12 ಕಿ.ಮೀ. ಕ್ರಮಿಸಬೇಕಾಗಿದ್ದಗ್ರಾಮಸ್ಥರು, ಸೂಕ್ತ ಸೇತುವೆ ಇಲ್ಲದೆ, 50 ಕಿ.ಮೀ. ಸುತ್ತಿ ಬಳಸಿಕೊಂಡು ಬರಬೇಕಾಗಿತ್ತು. ಹೀಗಾಗಿ ಸೇತುವೆ ನಿರ್ಮಾಣಕ್ಕಾಗಿ ಸ್ಥಳೀಯರು ಹಲವು ಬಾರಿ ಹೋರಾಟ ನಡೆಸಿದ್ದರು.

Advertisement

ಸ್ಥಳೀಯರ ಹೋರಾಟ ಕೊನೆಗೂ ಫ‌ಲಶ್ರುತಿಗೊಂಡು ಸರ್ಕಾರವು ಸೇತುವೆ ಕಾಮಗಾರಿಗೆ ಅನು ಮತಿ ನೀಡಿತ್ತು. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿ ಯಾವಾಗ ಮುಕ್ತಾಯಗೊಳ್ಳು ತ್ತದೆ. ಸಂಚಾರಕ್ಕೆ ಅನುವು ಯಾವಾಗ ಎಂದು ಸ್ಥಳೀಯರು ಚಾತಕ ಪಕ್ಷಿಯಂತೆ ಕಾಯ ತೊಡಗಿದ್ದಾರೆ.

ಹಾಸನ ಜಿಲ್ಲೆಯ ಆಲೂರು ತಾಲೂಕು ಕರಿಗೌಡನಹಳ್ಳಿ ಗ್ರಾಮದ ಬಳಿ ಹೇಮಾವತಿ ಹಿನ್ನೀರಿಗೆ ನಿರ್ಮಾಣವಾಗುತ್ತಿರುವ ಸೇತುವೆಯೇ ಸಾಕಷ್ಟು ಮಂದಿಯ ಹೋರಾಟಕ್ಕೆ ಮಣಿದ ಸೇತುವೆ. ಹಾಸನ ಹಾಗೂ ಆಲೂರು ತಾಲೂಕಿನ ಸಾರ್ವಜನಿಕರು ಹರ್ಷ ಹಲವು ದಶಕಗಳ ಕನಸು ಇದಾಗಿತ್ತು. ಎರಡು ತಾಲೂಕು ಕೇಂದ್ರಗಳು ಹತ್ತಿರವಿದ್ದರೂ ಸೇತುವೆಇಲ್ಲದೇ ಸಂಪರ್ಕಕೊಂಡಿಯೇ ಇರಲಿಲ್ಲ.

ಆಲೂರು ತಾಲೂಕಿನ ಕರಿಗೌಡನ ಹಳ್ಳಿ, ಚಾಕನಹಳ್ಳಿ, ಹಸಗನೂರು ಹಾಗೂ ಹಾಸನ ತಾಲೂಕಿನ ದುಂಡನಾಯಕನಹಳ್ಳಿ, ಬಳ್ಳೆ ಕೆರೆ, ಮಲ್ಲಿಗೆವಾಳು ಗ್ರಾಮಸ್ಥರ ಜಮೀನು ನದಿಯಿಂದ ಅಚೆ ಇಚೆ ಇದ್ದರೂ ಚಿಕ್ಕ ತೆಪ್ಪಗಳನ್ನು ಬಳಸಿ ಜೀವವನ್ನೇ ಕೈಯಲ್ಲಿಹಿಡಿದು ಒಡಾಡ ಬೇಕಾದ ಅನಿವಾರ್ಯತೆ ಎದುರಾಗಿತ್ತು. ದ್ವಿಚಕ್ರ ಅಥವಾ ಇನ್ನಾವುದೇ

ವಾಹನಗಳಲ್ಲಿ ತೆರಳಬೇಕಾದರೆ 50 ಕಿ.ಮೀ. ಸುತ್ತಿ ಕ್ರಮಿಸಿ ಈ ಗ್ರಾಮಗಳನ್ನು ತಲುಪಬೇಕಾಗಿತ್ತು. 4 ದಶಕಗಳಿಂದಲೂ ಈ ಒಂದು ಸೇತುವೆಗಾಗಿ ನಿರಂತರ ಹೋರಾಟ ನಡೆದುಕೊಂಡು ಬಂದಿತ್ತು. ಇದೀಗ ಸೇತುವೆ ಕಾಮಗಾರಿ ಆರಂಭಗೊಂಡು ನಿರ್ಮಾಣ ಹಂತವು ಅರ್ಧಷ್ಟು ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಸಂಚಾರ ನಡೆಸಬಹುದು ಎಂಬ ಸಂತಸದಲ್ಲಿದ್ದಾರೆ ಸ್ಥಳೀಯರು.

Advertisement

ಹೊರ ಜಿಲ್ಲೆಯ ಜನರಿಗೂ ಅನುಕೂಲ: ಈ ಸೇತುವೆ ನಿರ್ಮಾಣದಿಂದ 2 ತಾಲೂಕುಗಳ ವ್ಯಾಪಾರ ವಹಿವಾಟು ವೃದ್ಧಿ ಆಗುವುದರ ಜೊತೆಗೆ ಹೊಳೆನರಸೀಪುರ, ಅರಕಲಗೂಡು ತಾಲೂಕುಗಳಿಗೆ ಸಂಚರಿಸಲು ಸಾರ್ವಜನಿಕರಿಗೆ ಬಹಳ ಅನುಕೂಲವಾಗಿದೆ. ಮಡಕೇರಿ ಜಿಲ್ಲೆಗೆ ತೆರಳಲು 50 ರಿಂದ 60 ಕಿ.ಮೀ. ಕಡಿಮೆಯಾಗುತ್ತದೆ. ಇದರಿಂದಎಲ್ಲಾ ಭಾಗದ ಜನರಿಗೂ ಬಹಳ ಅನುಕೂಲವಾಗಿದೆ. ಕೆಆರ್‌ಡಿಸಿಎಲ್‌ (ಕರ್ನಾಟಕ ರಸ್ತೆ ಸಾರಿಗೆ ನಿಗಮ)ನಿಂದ 16 ಕೋಟಿ ರೂ. ಅನುದಾನದಲ್ಲಿ ಬಿಎಸ್‌ಆರ್‌ ಕಂಪನಿ ಕಾಮಗಾರಿ ನಿರ್ವಹಿಸುತ್ತಿದೆ. ಈಗಾಗಲೇ ಕಾಮಗಾರಿ ಆರಂಭಗೊಂಡು 9 ತಿಂಗಳು ಕಳೆದಿವೆ. ಪಿಲ್ಲರ್‌ಗಳ ನಿರ್ಮಾಣ ಹಂತ ಭಾಗಶಃ ಅರ್ಧಷ್ಟು ಮುಕ್ತಾಯಗೊಂಡಿದೆ. ಕಾಮಗಾರಿಯು ಮಳೆ ಹಾಗೂ ಕೊರೊನಾ ಸೋಂಕಿನ ಕಾರಣದಿಂದಾಗಿ ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯನ್ನು ಸ್ವಲ್ಪ ಚುರುಕುಗೊಳಿಸಿದರೆ ಮುಂದಿನ ಮೂರ್ನಾಲ್ಕುತಿಂಗಳುಗಳಲ್ಲಿ ಕಾಮಗಾರಿ ಮುಗಿದು ಸಾರ್ವಜನಿಕರ ಸಂಚಾರಕ್ಕೆ ಬಹುಬೇಗನೆ ಸಿಗುತ್ತದೆ ಎಂಬುವುದು ಸಾರ್ವಜನಿಕರ ಆಶಯ.

ಸೇತುವೇಕಾಮಗಾರಿ ನಡೆಯುತ್ತಿದೆ ಎಂಬುವುದು ಮುಖ್ಯವಲ್ಲ. ಕಾಮಗಾರಿಯು ಯಾವ ಗುಣಮಟ್ಟದಲ್ಲಿದೆ ಸಾಗುತ್ತಿದೆ ಎಂಬುವುದು ಮುಖ್ಯವಾಗಿದೆ. ಆದ್ದರಿಂದ ಸೇತುವೆ ಕಾಮಗಾರಿಯ ಹೊಣೆ ಹೊತ್ತಿರುವ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿಕಳಪೆ ಕಾಮಗಾರಿ ನಡೆಯದಂತೆ ಕ್ರಮ ವಹಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಈ ಸೇತುವೆ ನಿರ್ಮಾಣದಿಂದ ಎರಡು ತಾಲೂಕುಗಳ ಲಕ್ಷಾಂತರ ಜನರ ಸಂಪರ್ಕದಕೊಂಡಿಯಾಗಿದೆ. ಇದಕ್ಕೆ ಶ್ರಮಿಸಿದ ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಶಾಸಕ ಎಚ್‌.ಕೆ.ಕುಮಾರಸ್ವಾಮಿ, ಜೆಡಿಎಸ್‌ ತಾಲೂಕು ಅಧ್ಯಕ್ಷ ಮಂಜೇಗೌಡ್ರು, ಎಲ್ಲಾ ಪಕ್ಷದ ನಾಯಕರಿಗೆ ಗ್ರಾಮದ ಮುಖಂಡ ಕೃಷ್ಣೇಗೌಡ ಅಭಿನಂದನೆ ಸಲ್ಲಿಸಿದರು.

ಹ‌ಲವು ದಶಕಗಳಿಂದಲೂ ಸೇತುವೆ ನಿರ್ಮಾಣಕ್ಕಾಗಿ ಹೋರಾಟಮಾಡುತ್ತಬಂದಿದ್ದೆವು. ಸ್ಥಳೀಯರ ಬಹುದಿನಗಳ ಕನಸು ನನಸಾಗಿದೆ. ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೇತುವೆ ಕಾಮಗಾರಿಯನ್ನು ಚುರುಕುಗೊಳಿಸಿಬೇಕಿದೆ. -ಕೃಷ್ಣೇಗೌಡ, ಗ್ರಾಮದ ಮುಖಂಡ

 

-ಟಿ.ಕೆ.ಕುಮಾರಸ್ವಾಮಿ ಬೈರಾಪುರ

 

Advertisement

Udayavani is now on Telegram. Click here to join our channel and stay updated with the latest news.

Next