Advertisement

ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಸೈನಿಕ ಬಲ ಭಾರತ ದೇಶದ್ದು: ಸಿ.ಪಿ.ಒ ವಿಕ್ರಮ್ ದತ್ತಾ

03:41 PM Jul 28, 2020 | sudhir |

ಸುರತ್ಕಲ್ : ಭಾರತ ದೇಶದಲ್ಲಿ ನೆಮ್ಮದಿ ಸ್ವತಂತ್ರವಾಗಿ ಮುಕ್ತವಾಗಿರಲು ಸಾಧ್ಯವಾಗಿದೆ ಎಂದರೆ ಕಾರಣ ಗಡಿಯಲ್ಲಿ ಕಾಯುವ ವೀರ ಯೋಧರು. ಅವರ ಪರಾಕ್ರಮ, ಧೈರ್ಯಗಳಿಂದ ಶತ್ರು ಸೇನೆಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿದೆ. ಇಡೀ ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರವಾಗಿ ಭಾರತ ಹೊರಹೊಮ್ಮುತ್ತಿದೆ. ಸೈನಿಕರಲ್ಲಿಯೇ ಅತ್ಯಂತ ಬಲಿಷ್ಠ ರಾಷ್ಟ್ರ ನಮ್ಮ ಭಾರತ ದೇಶವಾಗಿದೆ ಎಂದು ನಿವೃತ್ತ ನೌಕಾಸೇನಾಧಿಕಾರಿ ಹಾಗೂ ನಿಕಟಪೂರ್ವ ದಕ ಜಿಲ್ಲಾ ನಿವೃತ್ತ ಸೈನಿಕರ ಸಂಘ ಅಧ್ಯಕ್ಷ ಸಿ ಪಿ ಒ ವಿಕ್ರಮ್ ದತ್ತಾ ಅವರು ನುಡಿದರು.

Advertisement

ಅವರು ಸುರತ್ಕಲ್ ರಾಷ್ಟ್ರ ಭಕ್ತ ನಾಗರಿಕ ವೇದಿಕೆ ವತಿಯಿಂದ ಸೋಮವಾರದಂದು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರುಗಿದ ಕಾರ್ಗಿಲ್ ವಿಜಯೋತ್ಸವ, ಸೈನಿಕ ಕಲ್ಯಾಣ ನಿಧಿ ವಿತರಣೆಯ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಐ ರಮಾನಂದ ಭಟ್ ಅವರು ಮಾತನಾಡಿ ಭಾರತ ದೇಶದಲ್ಲಿ ಸೈನಿಕರ ಬಲಿದಾನಗಳನ್ನು ಸ್ಮರಿಸುವ ಕೆಲಸ ಸದಾ ಆಗಬೇಕು. ಯುವಜನಾಂಗವು ಇನ್ನೂ ಹೆಚ್ಚು ವೀರಯೋಧರು ಈ ತಾಯ್ನಾಡಿನ ಸೇವೆಯನ್ನು ಮಾಡುವಲ್ಲಿ ಮುಂದಾಗಬೇಕು ಎಂದು ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಯುದ್ಧದಲ್ಲಿ ವೀರಮರಣಹೊಂದಿದ ಸುಮಾರು 11 ವೀರಯೋಧರ ಕುಟುಂಬದವರಿಗೆ ಸೈನಿಕ ಕಲ್ಯಾಣ ನಿಧಿಯ ವತಿಯಿಂದ 25,000 ರೂ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಹಾಗೂ ಮಾಜಿ ಸೈನಿಕರುಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸುರತ್ಕಲ್ ರಾಷ್ಟ್ರ ಭಕ್ತ ನಾಗರಿಕ ವೇದಿಕೆ ಗೌರವಧ್ಯಕ್ಷ ಕಡಂಬೋಡಿ ಮಹಾಬಲ ಪೂಜಾರಿ, ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್, ಗೌರವ ಸಲಹೆಗಾರ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಪ್ರಧಾನ ಕಾರ್ಯದರ್ಶಿ ಮಹೇಶ್ ಮೂರ್ತಿ ಸುರತ್ಕಲ್ ಮತ್ತಿತ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next