Advertisement

ಚನ್ನಸಂದ್ರದಲ್ಲಿ ಕರಗ ಮಹೋತ್ಸವ

12:53 AM May 12, 2019 | Lakshmi GovindaRaj |

ಮಹದೇವಪುರ: ಕಾಡುಗುಡಿಯ ಚನ್ನಸಂದ್ರದಲ್ಲಿ ವಹಿ°ಕುಲ ಸಮುದಾಯದಿಂದ ಹಮ್ಮಿಕೊಂಡಿದ್ದ ಶ್ರೀ ದ್ರೌಪತಾಂಬ ಮತ್ತು ಧರ್ಮರಾಯ ಸ್ವಾಮಿಯ 10ನೇ ವರ್ಷದ ಕರಗ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

Advertisement

ಶುಕ್ರವಾರ ರಾತ್ರಿ 11.30ಕ್ಕೆ ಪ್ರಾರಂಭಗೊಂಡ ಉತ್ಸವ, ಮುಂಜಾನೆ 8.30ರವೆಗೂ ಚನ್ನಸಂದ್ರ, ರಾಮೇಗೌಡನಗರ, ನಾಗೊಂಡನಹಳ್ಳಿ, ಎ.ಕೆ.ಜಿ ಕಾಲೋನಿ ಸೇರಿ ವಿವಿಧ ಬಡಾವಣೆಗಳು ಹಾಗೂ ಪ್ರಮುಖ ಬೀದಿಗಳಲ್ಲಿ ಸಾಗಿತು. ಚನ್ನಸಂದ್ರ ನಾಗರಾಜ್‌ ಹೂವಿನ ಕರಗ ಹೊತ್ತಿದ್ದರು. ತಮಟೆ, ವೀರಗಾಸೆ, ಡೊಳ್ಳು ಕುಣಿತ, ನಾದಸ್ವರ ಕಲಾತಂಡಗಳು ಕರಗ ಮಹೋತ್ಸವಕ್ಕೆ ಮೆರುಗು ನೀಡಿದವು.

ಕರಗ ಮಹೋತ್ಸವದ ಪ್ರಯುಕ್ತ 24 ಗ್ರಾಮ ದೇವತೆಗಳ ಹೂವಿನ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಚನ್ನಸಂದ್ರ ಚಂದ್ರಶೇಖರ್‌, ಸಿ.ಎ.ಕೃಷ್ಣಮೂರ್ತಿ, ಮುನಿರಾಜು, ಸಹದೇವ ಪಾಪಣ್ಣ, ಅಶೋಕ್‌ ಕುಮಾರ್‌, ಪ್ರಕಾಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next