Advertisement

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

12:36 AM May 11, 2024 | Team Udayavani |

ಕಾಪು: ದಿಢೀರ್‌ ಅನಾರೋಗ್ಯದಿಂದಾಗಿ ಬಾಲಕಿಯೋರ್ವಳು ಮೃತಪಟ್ಟ ಘಟನೆ ಕಾಪು ಠಾಣಾ ವ್ಯಾಪ್ತಿಯ ಮಣಿಪುರದಲ್ಲಿ ಗುರುವಾರ ನಡೆದಿದೆ. ರಿಕ್ಷಾ ಚಾಲಕ ಮಣಿಪುರ ನಿವಾಸಿ ಸಂದೇಶ್‌ ಸನಿಲ್‌ ಅವರ ಪುತ್ರಿ ಧನ್ವಿ (11) ಮೃತ ಬಾಲಕಿ.

Advertisement

ಧನ್ವಿ ಬುಧವಾರ ರಾತ್ರಿ ಎಲ್ಲರೊಂದಿಗೆ ಊಟ ಮುಗಿಸಿ ಮಲಗಿದ್ದು ಗುರುವಾರ ಮುಂಜಾನೆ ಮೂರು ಗಂಟೆಯ ವೇಳೆಗೆ ದಿಢೀರ್‌ ಅನಾರೋಗ್ಯಕ್ಕೀಡಾಗಿದ್ದಳು. ವಾಂತಿ ಮಾಡಲು ಆರಂಭಿಸಿದ್ದ ಆಕೆಯನ್ನು ಬೆಳಗ್ಗೆ ಮಣಿಪುರದ ಸ್ಥಳೀಯ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ಪರೀಕ್ಷಿಸಿ ಮದ್ದನ್ನು ನೀಡಿ ಮನೆಗೆ ಕಳುಹಿಸಿದ್ದರು. ಮಧ್ಯಾಹ್ನ ಬಳಿಕ ಮತ್ತೆ ಅನಾರೋಗ್ಯ ಬಾಧಿಸಿದ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಧನ್ವಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next