Advertisement

Kaup : ಸ್ಕೂಟರ್‌ಗೆ ಕಾರು ಢಿಕ್ಕಿ; ಸವಾರ ಗಂಭೀರ

09:55 PM May 26, 2023 | Team Udayavani |

ಕಾಪು: ಸಂಬಂಧಿಕರ ಉಪನಯನ ಕಾರ್ಯಕ್ರಮಕ್ಕೆ ಆಗಮಿಸಿ ವಾಪಸಾಗುತ್ತಿದ್ದ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಸ್ಕೂಟರ್‌ ಸವಾರ ಗಂಭೀರ ಗಾಯಗೊಂಡ ಘಟನೆ ಕಾಪು ಕೆ1 ಹೊಟೇಲ್‌ ಜಂಕ್ಷನ್‌ ಬಳಿ ಮೇ 24ರಂದು ನಡೆದಿದೆ.

Advertisement

ಕುಂದಾಪುರ ಹಂಗಳೂರು ನಿವಾಸಿ ಮಂಜಯ್ಯ ಆಚಾರ್‌ (73) ಗಾಯಾಳು ಸ್ಕೂಟರ್‌ ಸವಾರ. ಕಾಪುವಿನ ಕಾಳಿಕಾಂಬಾ ದೇವಸ್ಥಾನಕ್ಕೆ ಸಂಬಂಧಿಕರ ಉಪನಯನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಂಜಯ್ಯ ಆಚಾರ್‌ ಅವರು ಕಾರ್ಯಕ್ರಮ ಮುಗಿಸಿ ತನ್ನ ಸ್ಕೂಟರಿನಲ್ಲಿ ತ್ರಾಸಿ ಕಡೆಗೆ ಹೋಗಲು ಕಾಪು ಪೇಟೆಯಿಂದ ಕೆ1 ಹೋಟೆಲ್‌ ಜಂಕ್ಷನ್‌ ಬಳಿ ಡೈವರ್ಶನ್‌ ಮೂಲಕ ಮಂಗಳೂರು – ಉಡುಪಿ ರಾಷ್ಟೀಯ ಹೆದ್ದಾರಿಗೆ ಬಂದಿದ್ದು, ಈ ವೇಳೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ.

ಕಾರು-ಸ್ಕೂಟರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಮಂಜಯ್ಯ ಆಚಾರ್‌ ರಸ್ತೆಗೆ ಬಿದ್ದು ತಲೆಗೆ ತೀವ್ರ ರಕ್ತ ಗಾಯ ಹಾಗೂ ಕೈ, ಕಾಲು ಮೈಗೆ ತರಚಿದ ಗಾಯ ಆಗಿದೆ. ಗಾಯಾಳುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next